Posts Slider

Karnataka Voice

Latest Kannada News

DDPI ಕೆಳದಿಮಠ ನಿವೃತ್ತಿಗೆ ಕ್ಷಣಗಣನೆ- ಇವರು ಹೊರಟಿದ್ದಕ್ಕೆ “ಶುಭಾಶಯಗಳ ಸುರಿಮಳೆ”….

Spread the love

ಎಸ್.ಎಸ್.ಕೆಳದಿಮಠ ಅವರ ಕಾರ್ಯ ವೈಖರಿಯನ್ನ ಕಂಡಿರುವ ಜಿಲ್ಲಾಡಳಿತ “ಕಳಂಕರಹಿತ” ಅಧಿಕಾರಿಯನ್ನ ನೇಮಿಸಲು ಮುಂದಾಗಿದೆ. ಲೋಕಾಯುಕ್ತರ ಬಲೆಗೆ ಬಿದ್ದು ಎಲ್ಲೆಂದರಲ್ಲಿ ಕೈಕಾಲು ಆಡಿಸುವ ಮನಿಹೊಡೆದವನನ್ನ ಬರುವ ಅಧಿಕಾರಿಗಳು “ಅವರ ಸ್ಥಾನ” ತೋರಿಸಬೇಕಿದೆ.

ಧಾರವಾಡ: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹುದ್ದೆಯಿಂದ ಷಣ್ಮುಖಸ್ವಾಮಿ ಕೆಳದಿಮಠ ಅವರು ಇಂದು ನಿವೃತ್ತಿಯಾಗಲಿದ್ದು, ಅವರಿಗೆ ಹಲವರು ಶುಭಾಶಯಗಳನ್ನ ತಿಳಿಸಿದ್ದು, ಸಂಭ್ರಮದ ರೀತಿಯಲ್ಲಿ ವಾಟ್ಸಾಫ್‌ನಲ್ಲಿ ಬ್ಯಾನರ್‌ಗಳನ್ನ ಹಾಕುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಡಿಡಿಪಿಐ ಆಗಿ ಬಹುತೇಕ ಮೂರು ವರ್ಷ ಪೂರೈಸಿದ ಕೀರ್ತಿ ಇವರಿಗೆ ಸಲ್ಲತ್ತೆ. ಇವರು ತಮ್ಮ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಧಾರವಾಡ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿರುವ ಲಕ್ಷಣವಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಹಲವು ಶಾಲೆಯ ವಿವಾದಗಳಲ್ಲಿ ಕೋರ್ಟ್‌ಗೆ ಅತಿ ಹೆಚ್ಚು ಬಾರಿ ತಿರುಗುತ್ತಿದದ್ದು ಇವರ ಇತಿಹಾಸದಲ್ಲಿ ಮರೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗಂತೂ ಇವರನ್ನ ನೋಡಿದ್ರೇ, ಅತೀವ ಪ್ರೀತಿಯಿತ್ತು. ಅದೇ ಕಾರಣಕ್ಕೆ ಇವರನ್ನ ಸಭೆಯಲ್ಲಿ ಸಾಕಷ್ಟು ಪ್ರೀತಿಯಿಂದ ಸಂಭೋದಿಸುತ್ತಿದ್ದರು.

ಎಸ್.ಎಸ್.ಕೆಳದಿಮಠ ಅವರು ಡಿಡಿಪಿಐ ಆಗಿದ್ದ ಈ ಮೂರು ವರ್ಷದ ಅವಧಿಯಲ್ಲಿ ಪ್ರಶಸ್ತಿಗಳಿಂದ ಹಿಡಿದು ಪಂದ್ಯಾಟಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದಿದ್ದು, ಇವರ ಕಾರ್ಯಕ್ಷಮತೆಗೆ ಕಾರಣವಾಗಿದೆ.

ನಿವೃತ್ತಿ ಸಮಯದಲ್ಲಿ ಸರಕಾರದಿಂದ ಬರಬೇಕಾದ ಸಕಲ ಸವಲತ್ತುಗಳು ಬೇಗನೇ ಅವರಿಗೆ ಸಿಗುವಂತಾಗಲಿ ಎಂದು ಕರ್ನಾಟಕವಾಯ್ಸ್.ಕಾಂ ಕೂಡಾ ಹಾರೈಸುತ್ತದೆ.


Spread the love

Leave a Reply

Your email address will not be published. Required fields are marked *