ಪೈರೋಜ ಪಠಾಣ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದ ವೈಶಾಲಿ ಕುಲಕರ್ಣಿ…
ಹತ್ಯೆಗೀಡಾದ ಯುವ ಕಾಂಗ್ರೆಸ್ ಮುಖಂಡ ಪೈರೋಜ ಪಠಾಣ ನಿವಾಸಕ್ಕೆ ವೈಶಾಲಿ ಕುಲಕರ್ಣಿ ಭೇಟಿ: ಸಾಂತ್ವನ
ಧಾರವಾಡ: ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾದ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪೈರೋಜ ಪಠಾಣ ಅವರ ನಿವಾಸಕ್ಕೆ ವನ್ಯಜೀವಿ ಮಂಡಳಿಯ ಸದಸ್ಯೆ ವೈಶಾಲಿ ವಿನಯ ಕುಲಕರ್ಣಿ ಅವರು ಭೇಟಿ ನೀಡಿದರು.
ಪೈರೋಜ ಪಠಾಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ ಅವರು, ಬಳಿಕ ಪಠಾಣ ಅವರ ತಾಯಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.
ಸಾಂತ್ವನದ ನುಡಿಗಳು:
”ಪೈರೋಜ ಪಠಾಣ ಅವರ ಸಾವು ಪಕ್ಷಕ್ಕೆ ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ. ಒಬ್ಬ ಭರವಸೆಯ ಯುವ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಈ ಕಠಿಣ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನಾವು ವೈಯಕ್ತಿಕವಾಗಿ ಅವರ ಕುಟುಂಬದ ಬೆನ್ನಿಗೆ ಇರುತ್ತೇವೆ,” ಎಂದು ವೈಶಾಲಿ ಕುಲಕರ್ಣಿ ಹೇಳಿದರು.
ಇದೇ ಸಂದರ್ಭದಲ್ಲಿ ಘಟನೆಯ ಕುರಿತು ಮಾಹಿತಿ ಪಡೆದ ಅವರು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಮತ್ತು ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಆಶಿಸಿದರು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
