Posts Slider

Karnataka Voice

Latest Kannada News

ಧಾರವಾಡ: ​”ಬೆಂದ ಮನೆಯ ಬೂದಿಯಲಿ ಕಣ್ಣೀರಿನ ಕಥೆ: ಒಂದು ಪುಟ್ಟ ಆತಂಕಕ್ಕೆ ಸುಟ್ಟು ಕರಕಲಾಯ್ತು ಸುಂದರ ಸಂಸಾರ!”

Spread the love

ಧಾರವಾಡ: ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಅಭಾವ ಉಂಟಾಗಬಹುದೆಂಬ ಭೀತಿಯಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಸ್ಫೋಟಗೊಂಡು ಇಡೀ ಮನೆ ಸುಟ್ಟು ಕರಕಲಾದ ಭೀಕರ ಘಟನೆ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದೆ.

​ದುರ್ಘಟನೆಯಲ್ಲಿ ಪೂರ್ಣಿಮಾ ಹಾದಿಮನಿ (35) ಎಂಬುವವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಕಲ್ಲಪ್ಪ ಹಾದಿಮನಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಭವಿಷ್ಯದಲ್ಲಿ ತೈಲ ದರ ಏರಿಕೆಯಾಗಬಹುದು ಎಂಬ ಆತಂಕಕ್ಕೆ ಕಲ್ಲಪ್ಪ ಅವರು ಸುಮಾರು 5 ಲೀಟರ್ ಪೆಟ್ರೋಲ್ ತಂದು ಮನೆಯಲ್ಲಿಟ್ಟಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಆಕಸ್ಮಿಕವಾಗಿ ಪೆಟ್ರೋಲ್‌ಗೆ ಬೆಂಕಿ ಹತ್ತಿ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆಯಾದರೂ, ಕುಟುಂಬಸ್ಥರು ಗ್ಯಾಸ್ ಸೋರಿಕೆಯೇ ಕಾರಣ ಎನ್ನುತ್ತಿದ್ದಾರೆ.

​ಘಟನಾ ಸ್ಥಳಕ್ಕೆ ಧಾರವಾಡ ತಹಶೀಲ್ದಾರ್ ಹಾಗೂ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

Leave a Reply

Your email address will not be published. Required fields are marked *

You may have missed