ರಾಷ್ಟ್ರಪತಿ ಪದಕ ಪುರಸ್ಕೃತ “ಪೊಲೀಸ್ ಇನ್ಸಪೆಕ್ಟರ್” ಮೇಲೆ ಲೋಕಾಯುಕ್ತ ದಾಳಿ… ಏಳು ಕಡೆ ಒಂದೇ ಬಾರಿ ತಪಾಸಣೆ…

ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಇನ್ಸಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಇನ್ಸಪೆಕ್ಟರ್
ಗದಗ: ಸೇವೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಾರೆಂದು ರಾಷ್ಟ್ರಪತಿ ಪದಕ ಪಡೆದಿದ್ದ ಪೊಲೀಸ್ ಇನ್ಸಪೆಕ್ಟರ್ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಗದಗ ಶಹರ ಠಾಣೆಯ ಇನ್ಸಪೆಕ್ಟರ್ ಡಿ.ಬಿ.ಪಾಟೀಲ ಎಂಬುವವರೇ ದಾಳಿಗೆ ಒಳಗಾಗಿದ್ದು, ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆ.
ಇನ್ಸಪೆಕ್ಟರ್ ಡಿ.ಬಿ.ಪಾಟೀಲ ಶೌಚಾಲಯದೊಳಗೆ ಹೋದಾಗ ಲೋಕಾಯುಕ್ತ ಅಧಿಕಾರಿಗಳು ಹೊರಗೆ ಕಿವಿಕೊಟ್ಟು ನಿಂತಿದ್ದು ಕಂಡು ಬಂದಿದೆ.