ಧಾರವಾಡದಲ್ಲಿ “ಜಿಟಿ ಜಿಟಿ” ಮಳೆಯಲ್ಲಿ ಬಿಸಿಯೇರಿಸಿರೋ ಲೋಕಾಯುಕ್ತ ‘ರೇಡ್’….Exclusive

ಧಾರವಾಡ: ಜಿಟಿ ಜಿಟಿ ಮಳೆಯಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಎರಡು ಕಡೆ ದಾಳಿ ಮಾಡಿದ್ದು, ಪ್ರಮುಖವಾದ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಮಲಪ್ರಭಾ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ ವಲ್ಸಂದ ಅವರ ವಿಚಾರಣೆ ನಡೆದಿದ್ದು, ಧಾರವಾಡದ ಕೆವಿಜಿ ಬ್ಯಾಂಕ್ ಬಳಿಯ ವಸತಿ ನಿಲಯ ಮತ್ತು ಕಚೇರಿಯಲ್ಲಿ ತಪಾಸಣೆ ಆರಂಭಗೊಂಡಿದೆ.
ವೀಡಿಯೋ….
ನಗರದ ಲೋಕಾಯುಕ್ತ ಕಚೇರಿ ಪಕ್ಕದಲ್ಲೇ ಇರುವ ವಲಯ ಕಚೇರಿ, ಮಲಪ್ರಭಾ ಮುಖ್ಯ ಇಂಜಿನಿಯರ್ ಕಚೇರಿ, ಇಂಜಿನಿಯರ್ ಬೆಳಗಾವಿಯ ಮೂಲ ಮನೆ ಹಾಗೂ ಬಾಗಲಕೋಟೆ ಜಿಲ್ಲೆಯ ಕಜ್ಜಿದೋಣಿ ಸೇರಿ ಜಮಖಂಡಿ, ಜಕನೂರು ಮನೆ ಮೇಲೂ ಲೋಕಾ ದಾಳಿ ನಡೆದಿದೆ.
ಲೋಕಾ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ನಡೆದಿರುವ ದಾಳಿ ಆರಂಭಗೊಂಡಿದೆ.