ಗಾಲಿ ಜನಾರ್ಧನ ರೆಡ್ಡಿ ಧರ್ಮಪತ್ನಿ ಶ್ರೀಲಕ್ಷ್ಮಿ ಅರುಣಾರಿಂದ “ಕೊಲ್ಲೂರು-ಸುಬ್ರಹ್ಮಣ್ಯ”ದಲ್ಲಿ ಹೋಮ ಹವನ….

ದಕ್ಷಿಣ ಕನ್ನಡ: ಬಿಜೆಪಿಯ ಮಾಜಿ ಸಚಿವ, ಹಾಗೂ ಗಂಗಾವತಿ ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಅವರ ಧರ್ಮಪತ್ನಿಯಾದ ಶ್ರೀ ಲಕ್ಷ್ಮಿ ಅರುಣಾ ಅವರು ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಪ್ರತಿಷ್ಠಿತ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಮಾಡಿ ದೇವರಲ್ಲಿ ಪ್ರಾರ್ಥಿಸಿದರು.
ಭಕ್ತರ ಜೊತೆಗೆ ಸರದಿ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ಪ್ರವೇಶ ಪಡೆದು, ದೇವರ ದರ್ಶನ ಪಡೆದು, ಕಷ್ಟ ನಿವಾರಣೆ ಮಾಡುವಂತೆ ಪ್ರಾರ್ಥಿಸಿದರು.