Posts Slider

Karnataka Voice

Latest Kannada News

CET ಪರೀಕ್ಷೆ ವೇಳೆಯಲ್ಲಿ “ಜನಿವಾರ” ಅಷ್ಟೇ ಅಲ್ಲ, ಏನೇನು ಕಟ್ ಮಾಡಿ ತೆಗೆಸಿದ್ರು ಗೊತ್ತಾ…!? ಇಲ್ಲಿದೆ ಸಂಪೂರ್ಣ ಮಾಹಿತಿ…

Spread the love

ಧಾರವಾಡ: ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದ ಸಿಇಟಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳನ್ನ ನಡೆಸಿಕೊಂಡಿರುವ ರೀತಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೇವಲ ಜನಿವಾರನ್ನ ಮಾತ್ರ ತೆಗೆದಿಲ್ಲ ಎಂಬುದು ಬಹಿರಂಗವಾಗತೊಡಗಿದೆ.

ಏಪ್ರಿಲ್ 16ರಂದು ಬೆಳಿಗ್ಗೆ ಫಿಸಿಕ್ಸ್,  ಮಧ್ಯಾಹ್ನ ಕೆಮಿಸ್ಟ್ರಿ ಪರೀಕ್ಷೆ ನಡೆದಿದ್ದು, ಮರುದಿನ ದಿನಾಂಕ 17ರ ಬೆಳಿಗ್ಗೆ ಗಣಿತ, ಮಧ್ಯಾಹ್ನ ಬಯಾಲಜಿ ಪರೀಕ್ಷೆ ನಡೆದಿತ್ತು. ಈ ಸಮಯದಲ್ಲಿ ಮೊದಲ ದಿನವೇ ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿ ಸಮೂಹ ಮುಜುಗರ ಅನುಭವಿಸಿದೆ.

ವಿದ್ಯಾರ್ಥಿನಿಯರ ಕೈಗೆ ಕಟ್ಟಿಕೊಂಡ ದಾರ (ದೇವರ), ಕಿವಿಯೋಲೆ, ತಲೆಗೂದಲಿಗೆ ಹಾಕಿಕೊಂಡ ಕ್ಲೀಪ್, ಹೇರ್ ಬ್ಯಾಂಡ್, ವಾಚ್ ಸೇರಿದಂತೆ ಹಲವು ವಸ್ತುಗಳನ್ನ ತೆಗೆಸಿದ್ದಾರೆ. ಬಹುತೇಕ ಸಮಾಜದವರು ನಂಬಿಕೆಯಿಂದ ಕಟ್ಟಿಕೊಂಡ ದಾರವನ್ನೂ ತುಂಡರಿಸಿದ್ದಾರೆ.

ಇದರ ಜೊತೆಗೆ ಪ್ಯಾಂಟ್, ಶರ್ಟ್ ಹಾಕಿಕೊಂಡು ಬರಬೇಕು. ಅವುಗಳಿಗೆ ಹೆಚ್ಚಿನ ಜೇಬು ಇರಬಾರದೆಂದು ಕೂಡಾ ಮೊದಲ ಪೇಪರ್ ದಿನ ಹೇಳಿದ್ದಾರೆ. ಈಗಷ್ಟೇ ಪಿಯುಸಿ ಮುಗಿಸಿರುವ ವಿದ್ಯಾರ್ಥಿ ಸಮೂಹಕ್ಕೆ ಈ ವ್ಯವಸ್ಥೆ ಮಾನಸಿಕವಾಗಿ ನೋವನ್ನುಂಟು ಮಾಡಿರುವುದು ಸುಳ್ಳಲ್ಲ.

ಪರೀಕ್ಷೆ ಸಮಯದಲ್ಲಿ ಯಾವುದೇ ಅಪರಾ-ತಪರಾ ನಡೆಯಬಾರದು ಎಂಬ ಉದ್ದೇಶದ ಜೊತೆಗೆ ಇಲೆಕ್ಟ್ರಾನಿಕ್ ವಸ್ತುಗಳು ಯಾವ್ಯಾವ ರೂಪದಲ್ಲಿ ಇರಬಹುದೆಂಬ ಶಂಕೆ ಸರಕಾರವನ್ನ ಕಾಡಿತ್ತಾ… ಹಾಗಾಗಿಯೇ ಸರಕಾರ ಇಂತಹ ಸಂದರ್ಭಗಳಲ್ಲಿ ಹೀಗೆ ನಡೆದುಕೊಳ್ಳಲು ಸೂಚಿಸಿತ್ತಾ ಎಂಬ ಪ್ರಶ್ನೆ ಮೂಡತ್ತೆ.


Spread the love

Leave a Reply

Your email address will not be published. Required fields are marked *