Posts Slider

Karnataka Voice

Latest Kannada News

ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ, ಪಿಎಸ್ಐ ಲಾಲಸಾಬ ಜೂಲಕಟ್ಟಿ ಸೇರಿ ಹಲವರಿಗೆ ಮುಖ್ಯಮಂತ್ರಿ ಪದಕ ಘೋಷಣೆ…

Spread the love

ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ 2024 ರ ಮುಖ್ಯಮಂತ್ರಿ ಪದಕವನ್ನ ಘೋಷಣೆ ಮಾಡಿದ್ದು, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರಿಗೂ ಪದಕ ಘೋಷಣೆಯಾಗಿದೆ.

ಧಾರವಾಡ ನಗರದಲ್ಲಿ ನಡೆದ ಹಲವು ಪ್ರಮುಖ ಪ್ರಕರಣಗಳನ್ನ ಪತ್ತೆ ಹಚ್ಚಲು ಯಶಸ್ವಿಯಾಗಿರುವ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು, ಸಾರ್ವಜನಿಕರೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿದ್ದಾರೆ. ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಲಾಲಸಾಬ ಜೂಲಕಟ್ಟಿ ಅವರಿಗೆ ಸಿಎಂ ಪದಕ ಲಭಿಸಿದ್ದು, ಅವರ ಉತ್ತಮ ಕರ್ತವ್ಯ ನಿರ್ವಹಣೆಗೆ ಸಾಕ್ಷಿಯಾಗಿದೆ.

ಲಾಲಸಾಬ ಜೂಲಕಟ್ಟಿಯವರು ಎಲ್ಲ ಸಮಾಜದ ಜನರೊಂದಿಗೆ ಅತ್ಯುತ್ತಮ ಸ್ನೇಹವನ್ನಿಟ್ಡುಕೊಂಡು, ಕರ್ತವ್ಯ ನಿರ್ವಹಿಸುವಲ್ಲಿ ಜನಾನುವಾಗಿದ್ಸಾರೆ. ಇಂತಹ ಅಧಿಕಾರಿಗಳಿಗೆ ಪದಕ ಘೋಷಣೆಯಾಗಿದ್ದು, ಪದಕ ಗೌರವ ಹೆಚ್ಚಿದಂತಾಗಿದೆ.

ವಿಜಯಪುರ ಎಡಿಷನಲ್ ಎಸ್ಪಿ ರಾಮನಗೌಡ ಹಟ್ಟಿ, ಘಟಪ್ರಭಾ ಇನ್ಸ್‌ಪೆಕ್ಟರ್ ಹಸನಸಾಬ ಮುಲ್ಲಾ, ಡಿಎಸ್ಪಿ ಸಚಿನ ಚೆಲವಾದಿಯವರಿಗೂ ಪದಕ ಘೋಷಣೆಯಾಗಿದೆ.


Spread the love

Leave a Reply

Your email address will not be published. Required fields are marked *