ಧಾರವಾಡ: ಸತ್ತ ವ್ಯಕ್ತಿಯ ಪತ್ತೆ ಹಚ್ಚಲು ನೆರವಾಯಿತು “ಜನಿವಾರ”- PI ಶ್ರೀನಿವಾಸ್ ಮೇಟಿ ‘ಪ್ಲಾನ್ ವರ್ಕೌಟ್’…!!!

ಧಾರವಾಡ: ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಶವವಾದ ವ್ಯಕ್ತಿಯ ಜನಿವಾರ ಉಪಯೋಗಕ್ಕೆ ಬಂದ ಅಪರೂಪದ ಘಟನೆ ಧಾರವಾಡದಲ್ಲಿ ಸಂಭವಿಸಿದೆ.
ಇದೇ ತಿಂಗಳ ಹದಿನಾಲ್ಕರಂದು ಕಲಘಟಗಿ ರಸ್ತೆಯಲ್ಲಿನ ಬ್ಯಾಂಕ್ ಆಫ್ ಬರೋಡಾ ಬಳಿ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದು, ಗಾಯಾಳು ಪಾದಚಾರಿ ಕಿಮ್ಸನಲ್ಲಿ ಸಾವಿಗೀಡಾಗಿದ್ದರು.
ಘಟನೆಯಲ್ಲಿ ಮರಣ ಹೊಂದಿದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದಾಗ, ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು, ಹೊಸದೊಂದು ಪ್ಲಾನ್ ಮಾಡಿ, ಅವರು ಧರಿಸಿದ ಜನಿವಾರದ ಭಾವಚಿತ್ರಗಳನ್ನ ಕೆಲವು ಗ್ರೂಫ್ಗಳಲ್ಲಿ ಹಾಕಿದ್ದರು.
ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರ ಪ್ಲಾನ್ ಸಕ್ಸಸ್ ಆಗಿದ್ದು, ಮೃತ ವ್ಯಕ್ತಿಯು 63 ವರ್ಷದ ಮುಕುಂದ ವಾಸುದೇವ ಚಿಕ್ಕೂರ ಎಂದು ಪತ್ತೆ ಹಚ್ಚಿದ್ಸಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.