ಅವಳಿನಗರದವರಿಗಾಗಿ “ಪಣ ತೊಟ್ಟ” ಪೊಲೀಸ್ ಕಮೀಷನರ್ ಎನ್.ಶಶಿಕುಮಾರ ಆ್ಯಂಡ್ ಟೀಂ…

ಹುಬ್ಬಳ್ಳಿ: ಅವಳಿನಗರದ ಜನರಿಗಾಗಿ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಪೊಲೀಸರು ಪಣ ತೊಟ್ಟಿದ್ದು, ಅದಕ್ಕೆ ಪೂರಕವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನ ಕರೆದು ಎಚ್ಚರಿಕೆ ನೀಡತೊಡಗಿದ್ದಾರೆ.
ಹೌದು.. ಬರೋಬ್ಬರಿ ಹತ್ತು ವರ್ಷದಿಂದೀಚಿಗೆ NDPS ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಪೊಲೀಸ್ ಪರೇಡ್ ನಡೆಸಿದ್ದಲ್ಲದೇ, ತಮ್ಮದೇ ಆದ ರೀತಿಯಲ್ಲಿ ಎಚ್ಚರಿಕೆಯನ್ನೂ ನೀಡಿದ್ರು.
ವೀಡಿಯೋ…
ಅವಳಿನಗರದ ಜನರ ನೆಮ್ಮದಿಗಾಗಿ ಪೊಲೀಸರು ಹಗಲಿರುಳು ಶ್ರಮ ವಹಿಸುತ್ತಿದ್ದು, ಸಾರ್ವಜನಿಕರು ಕೂಡಾ ಅಕ್ರಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕಿದೆ.