Karnataka Voice

Latest Kannada News

38 ಗಂಟೆ ಕಳೆದರೂ ಸಿಗದ “ದುರುಳ”- ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಚಲನವಲನದ ರೆಕಾರ್ಡ್…!!!

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿ ವೀರಾವೇಷದಿಂದ ಬಂದು ಹತ್ಯೆ ಮಾಡಿ ಪರಾರಿಯಾಗಿರುವ ದೂರ್ತನ ಸುಳಿವು ಸಿಗದೇ ಇದ್ದರೂ, ಆತನ ಚಲನವಲನದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

ವಿಶ್ವನಾಥ ಸಾವಂತ ಅಲಿಯಾಸ್ ಗಿರಿ ಅಲಿಯಾಸ್ ಗಿರೀಶ ಎಂಬ ಹತ್ಯೆಕೋರ ಅಂಜಲಿ ಅಂಬಿಗೇರಳ ಮನೆಗೆ ಹೇಗೆ ಬಂದ, ಹೇಗೆ ಪರಾರಿಯಾದ ಎಂಬುದರ ಜೊತೆಗೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ.

ವೈರಲ್ ಆಗಿರುವ ದೃಶ್ಯಗಳು…

ಆರೋಪಿಯ ಬಂಧನಕ್ಕೆ ಎರಡು ತಂಡಗಳನ್ನ ರಚನೆ ಮಾಡಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸುಳಿವು ದೊರಕಿಲ್ಲ.

Leave a Reply

Your email address will not be published. Required fields are marked *