Karnataka Voice

Latest Kannada News

“ಅಂಜಲಿ ಹತ್ಯೆ” ಹಿಂದೆ ನಿರ್ಲಕ್ಷ್ಯ- ಇನ್ಸಪೆಕ್ಟರ್, ಮಹಿಳಾ ಮುಖ್ಯಪೇದೆ ಸಸ್ಪೆಂಡ್: ಕರ್ನಾಟಕವಾಯ್ಸ್.ಕಾಂ ಇಂಪ್ಯಾಕ್ಟ್…!!!

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಯ ನಡೆಯುವ ಮುನ್ನ ಪೊಲೀಸರ ನಿರ್ಲಕ್ಷ್ಯ ನಡೆದಿದೆ ಎಂದು ಕರ್ನಾಟಕವಾಯ್ಸ್.ಕಾಂ ಮಾಹಿತಿ ಹೊರಹಾಕಿದ ಕೆಲವೇ ಸಮಯದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮತ್ತು ಮಹಿಳಾ ಮುಖ್ಯ ಪೇದೆಯನ್ನ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಕೊಲೆಗೆಡುಕ ವಿಶ್ವನಾಥ ಸಾವಂತ ಅಲಿಯಾಸ್ ಗಿರೀಶ ಎಂಬಾತ ಅಂಜಲಿಗೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದ. ಈ ವಿಷಯವನ್ನ ಪೊಲೀಸರಿಗೆ ತಿಳಿಸಲು ಹೋದಾಗ, ಅದು ಮೂಢನಂಬಿಕೆ ಎಂದು ಹೇಳಿಕಳಿಸಿದ್ದರೆಂದು ಮನೆಯವರು ದೂರಿದ್ದರ ವೀಡಿಯೋ ಸಮೇತ ಕರ್ನಾಟಕವಾಯ್ಸ್. ಕಾಂ ಮಾಹಿತಿಯನ್ನು ಹಂಚಿಕೊಂಡಿತ್ತು.

ಹಂಚಿಕೊಂಡ ವೀಡಿಯೋ…

ಇದಾದ ಕೆಲವೇ ಸಮಯದಲ್ಲಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಡಿಸಿಪಿಯವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ತದನಂತರ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಚಿಕ್ಕೋಡಿ ಹಾಗೂ ಮಹಿಳಾ ಮುಖ್ಯ ಪೇದೆ ರೇಖಾ ಹಾವರಡ್ಡಿ ಅವರನ್ನ ಅಮಾನತ್ತು ಮಾಡಿದ್ದಾರೆ.

Leave a Reply

Your email address will not be published. Required fields are marked *