Posts Slider

Karnataka Voice

Latest Kannada News

“ಮಹಾಂತೇಶ ಭೋವಿ” ನವಲಗುಂದ ಫುರಸಭೆ “ಸ್ಥಾಯಿ ಸಮಿತಿ”ಗೆ ಅಧ್ಯಕ್ಷ….!

Spread the love

ನವಲಗುಂದ: ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಮಹಾಂತೇಶ ಭೋವಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಶಾಸಕ ಎನ್.ಹೆಚ್.ಕೋನರೆಡ್ಡಿ ಮತ್ತು ವಿನೋದ ಅಸೂಟಿ ಅವರುಗಳ ಮಾರ್ಗದರ್ಶನದ ಮೇರೆಗೆ ಪುರಸಭೆ ಸದಸ್ಯರ ಸಹಕಾರದಿಂದ ಮಹಾಂತೇಶ ಫಕ್ಕೀರಪ್ಪ ಭೋವಿ ಅವರನ್ನ ಆಯ್ಕೆ ಮಾಡಲಾಗಿದೆ.

ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಹಾಂತೇಶ ಅವರು, ನೇಮಕ ಮಾಡಿರುವುದು ಸಂತಸ ತಂದಿದೆ. ಈ ಗೌರವವನ್ನು ನನ್ನ ವಾರ್ಡಿನ ಜನತೆಗೆ ಮೊದಲು ಮಾಡಿ, ನನ್ನ ಎಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕಾರ್ಯಕರ್ತರು, ಮುಖಂಡರುಗಳು ಹಾಗೂ ನನ್ನ ಪ್ರಗತಿಗೆ ಮಾರ್ಗದರ್ಶನ ನೀಡುವ ಸರ್ವರಿಗೂ ಅರ್ಪಿಸುವೆ ಎಂದಿದ್ದಾರೆ.

ಈ ಸಭೆಯಲ್ಲಿ ಎಸಿ  ಶಾಲಂ ಹುಸೇನ್, ಸಿಓ ವೆಂಕಟೇಶ ನಾಗನೂರು, ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

ಶಾಸಕ ಎನ್.ಎಚ್.ಕೋನರೆಡ್ಡಿಯವರು ಇದೇ ಸಮಯದಲ್ಲಿ ಮಹಾಂತೇಶ ಅವರನ್ನ ಸತ್ಕರಿಸಿದರು.


Spread the love

Leave a Reply

Your email address will not be published. Required fields are marked *