“ಬಿಜೆಪಿ ನ್ಯೂ ಟೀಂ” ಧಾರವಾಡ ಜಿಲ್ಲೆಯ ಒಬ್ಬರಿಗೂ ಅವಕಾಶವಿಲ್ಲ….!!!

ಬೆಂಗಳೂರು: ರಾಜ್ಯದ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾದ ನಂತರ ಹೊಸ ತಂಡವನ್ನ ರಚನೆ ಮಾಡಿರುವ ಆದೇಶ ಹೊರಬಿದ್ದಿದೆ.
ನೂತನ ಪದಾಧಿಕಾರಿಗಳ ತಂಡದಲ್ಲಿ ಧಾರವಾಡ ಜಿಲ್ಲೆಯ ಒಬ್ಬರಿಗೂ ಅವಕಾಶ ಸಿಗದೇ ಇರುವುದು ತೀವ್ರ ಅಚ್ಚರಿ ಮೂಡಿಸಿದ್ದು, ಮತ್ತೆ ಗೊಂದಲ ಸೃಷ್ಟಿಯಾಗಬಹುದೆಂದು ಹೇಳುವ ವಾತಾವರಣ ನಿರ್ಮಾಣವಾಗಲಿದೆ.
ರಾಜ್ಯದ ಉಪಾಧ್ಯಕ್ಷರನ್ನಾಗಿ ಮಾಜಿ ಶಾಸಕರುಗಳನ್ನ ನೇಮಕ ಮಾಡಲಾಗಿದೆ. ಮುರುಗೇಶ ನಿರಾಣಿ, ರಾಜುಗೌಡ, ಬೈರತಿ ಬಸವರಾಜ ಸೇರಿದಂತೆ ಹತ್ತು ನಾಯಕರನ್ನ ನೇಮಕ ಮಾಡಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಹಾಲಿ ಮಾಜಿ ಶಾಸಕರನ್ನ ನೇಮಕ ಮಾಡಲಾಗಿದೆ.