ಮಕ್ಕಳಿಲ್ಲದ ಹೆಬ್ಬಳ್ಳಿಯ ನಿಂಗಪ್ಪನನ್ನ ಧಾರವಾಡದಲ್ಲಿ ಕೊಚ್ಚಿ ಕೊಂದ “ತಮ್ಮನ ಮಕ್ಕಳು”…!

ಧಾರವಾಡ: ನಗರದ ಕೊಪ್ಪದಕೇರಿಯಲ್ಲಿ ಹೆಬ್ಬಳ್ಳಿ ಗ್ರಾಮದ ವ್ಯಕ್ತಿಯನ್ನ ತಮ್ಮನ ಮಕ್ಕಳೇ ಆಸ್ತಿಗಾಗಿ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಸಂಭವಿಸಿದೆ.
ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ ಎಂಬಾತನನ್ನೇ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ. ಇದಕ್ಕೆ ಆಸ್ತಿ ವಿವಾದವೇ ಕಾರಣವೆಂದು ಹೇಳಲಾಗಿದೆ.
ನಿಂಗಪ್ಪ ಹಡಪದನಿಗೆ ಮಕ್ಕಳು ಆಗಿಲ್ಲ. ಆದರೆ, ಆತನ ತಮ್ಮ ಕಲ್ಲಪ್ಪನಿಗೆ ಮೂರು ಮಕ್ಕಳಿದ್ದು, ಅವರೇ ಬೈಕಿನಲ್ಲಿ ಬಂದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಗೋವನಕೊಪ್ಪದ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಶ್ರೀಕಾಂತ, ಮಲ್ಲಿಕಾರ್ಜುನ ಹಾಗೂ ಪ್ರಕಾಶ ಎಂಬುವವರೇ ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಶ್ರೀಕಾಂತ ಎಂಬಾತನೇ ಬೈಕ್ ಚಲಾಯಿಸುತ್ತಿದ್ದನೆಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.