ಅಕ್ಟೋಬರ್ ಶಾಲೆ “ರಜೆ ವಿಸ್ತರಿಸಿ”: ಶಿಕ್ಷಣ ಸಚಿವರಿಗೆ ಸಭಾಪತಿ ಬಸವರಾಜ ಹೊರಟ್ಟಿ “ಕಾಲ್”

ಹುಬ್ಬಳ್ಳಿ: ದಸರಾ ರಜೆಯಂದು ಅಕ್ಟೋಬರ್ ತಿಂಗಳಲ್ಲಿ ಕೊಡುವ ರಜೆಯನ್ನ ಶಾಲೆಗಳಿಗೆ ಅಕ್ಟೋಬರ್ ಮೂವತ್ತರವರೆಗೆ ವಿಸ್ತರಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರಿಗೆ ಕೋರಿದರು.
ಮೊಬೈಲ್ ಕಾಲ್ ಮಾಡಿದ ಹೊರಟ್ಟಿಯವರು ಆಗುವ ತೊಂದರೆಗಳನ್ನು ವಿವರಿಸಿದರು. ಪೂರ್ತಿ ವೀಡಿಯೋ ಇಲ್ಲಿದೆ ನೋಡಿ…
ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ವ್ಯವಸ್ಥೆಯಲ್ಲಿ ಇಲ್ಲ. ಅವಾಗ ರಜಾ ದಿನಗಳು ಫಿಕ್ಸ್ ಆಗಿ ಇರ್ತಾ ಇದ್ವು. ಜ್ಞಾನ ಇಲ್ಲದ ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ರಜಾ ದಿನಗಳ ನಿಗದಿ ಮಾಡಿದ್ದಾರೆ, ಇದು ಸರಿಯಾದದ್ದಲ್ಲ ಎಂದರು.
ನಾನು ಈ ಸಲುವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೆನೆ. ಈ ಹಿಂದೆ ಇದ್ದಂತಹ ಪದ್ದತಿಯನ್ನ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸುತ್ತೇನೆ ಎಂದರು.