ಹುಬ್ಬಳ್ಳಿಯ “ರಾಷ್ಟ್ರೋತ್ಥಾನ ಕೇಂದ್ರ”ದಲ್ಲಿ ರಕ್ತದ ಕೊರತೆ: ದತ್ತಮೂರ್ತಿ ಕುಲಕರ್ಣಿ ಮನವಿ…

ಹುಬ್ಬಳ್ಳಿ: ಸಾವಿರಾರೂ ಜನರಿಗೆ ರಕ್ತವನ್ನ ನೀಡಿ, ಹಲವರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೋತ್ಥಾನ ರಕ್ತ ಭಂಡಾರದಲ್ಲಿ ರಕ್ತದ ತೀವ್ರ ಕೊರತೆಯಾಗಿದೆ ಎಂದು ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಹೇಳಿದ್ದಾರೆ.
ಅನಾರೋಗ್ಯ ಪೀಡಿತರಿಗೆ ರಕ್ತ ನೀಡಲು ಕೊರತೆ ಕಾಣುತ್ತಿದೆ. ಇದರಿಂದ ಪ್ರಾಣಗಳು ಹೋಗುವ ಸ್ಥಿತಿ ಬರಬಹುದೆಂದು ಆತಂಕವನ್ನ ಆಡಳಿತಾಧಿಕಾರಿ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ ದತ್ತಮೂರ್ತಿ ಕುಲಕರ್ಣಿ ಅವರು, ಸಾಧ್ಯವಾದಷ್ಟು ಜನರು ರಕ್ತ ಭಂಡಾರಕ್ಕೆ ಬಂದು ರಕ್ತ ದಾನವನ್ನ ಮಾಡಬೇಕೆಂದು ಕೋರಿದ್ದಾರೆ.