ಹುಬ್ಬಳ್ಳಿಯ “ಚೆನ್ನಮ್ಮ ಮೈದಾನ”ದಲ್ಲಿ ಪ್ರತಿಷ್ಠಾಪನೆಯ “ವಿಘ್ನನಿವಾರಕ”ನ Exclusive photos…

ಧಾರವಾಡ: ತೀವ್ರ ಚರ್ಚೆಗೆ ಕಾರಣವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿನ ಗಣೇಶ ಪ್ರತಿಷ್ಠಾಪನೆ ವಿವಾದ ಅಂತ್ಯಗೊಂಡಿದ್ದು, ಇದೀಗ ಭರದ ಸಿದ್ಧತೆ ಆರಂಭಗೊಂಡಿದೆ.
ರಾಣಿ ಚೆನ್ನಮ್ಮ ಮೈದಾನವೆಂದೂ ಕರೆಯುತ್ತಿರುವ ಸ್ಥಳದಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಲಿದ್ದು, ಧಾರವಾಡದಲ್ಲಿ ವಿಘ್ನನಿವಾರಕ ಸಿದ್ಧಗೊಳ್ಳುತ್ತಿದ್ದಾನೆ.
ಧಾರವಾಡದ ಚರಂತಿಮಠ ಗಾರ್ಡನ್ದಲ್ಲಿ ಸುರೇಶ ಕರಿಗಾರ ಅವರ ಕೈಚಳಕದಲ್ಲಿ ಸಿದ್ಧಗೊಳ್ಳುತ್ತಿರುವ ಶ್ರೀ ಗಣೇಶನ ಅಂತಿಮ ತಯಾರಿ ನಡೆದಿದೆ.
ಸ್ಥಳಕ್ಕೆ ಹಿಂದು ಸಂಘಟನೆ ಪ್ರಮುಖ ಜಯತೀರ್ಥ ಕಟ್ಟಿ, ಕಿಶನ್, ಸುಭಾಸಸಿಂಗ್ ಜಮಾದಾರ, ಮಹೇಂದ್ರ ಕೌತಾಳ ಸೇರಿದಂತೆ ಹಲವರು ಭೇಟಿ ನೀಡಿದರು.