Karnataka Voice

Latest Kannada News

ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ಖಚಿತತೆ ಬಗ್ಗೆ ಮಾತನಾಡದ ಸಚಿವ ಸಂತೋಷ ಲಾಡ…!!

ಧಾರವಾಡ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್‌ಗೆ ಬರುತ್ತಿರುವ ಮಾಹಿತಿಯನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಖಚಿತಪಡಿಸಿಲ್ಲ.

ಇಂದು ತಮ್ಮನ್ನ ಭೇಟಿ ಮಾಡಿದ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸಂತೋಷ ಲಾಡ ಅವರು, ಪತ್ರಕರ್ತರಿಗೆ ಇರುವ ರೀತಿಯಲ್ಲಿ ಮಾಹಿತಿಯಿದೆ ಹೊರತು, ವಿಶೇಷವಾದ ಮಾಹಿತಿ ಯಾವುದೂ ಇಲ್ಲವೆಂದರು.

ಪೂರ್ಣ ವೀಡಿಯೋ ನೋಡಿ..

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿ ತೊರೆಯುತ್ತಾರೆ ಎಂಬ ರೆಕ್ಕೆ ಪುಕ್ಕವಿಲ್ಲದ ವದಂತಿ ಹಲವು ದಿನಗಳಿಂದ ಹರಿದಾಡುತ್ತಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *