Posts Slider

Karnataka Voice

Latest Kannada News

ಧಾರವಾಡದ “ಅಣ್ಣಿಗೇರಿ ಕಾಲೇಜಿ”ನಲ್ಲಿ ಸಂಜನಾ ಶಿಂಧೆಗೆ ಸತ್ಕಾರ…

1 min read
Spread the love

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..

ಧಾರವಾಡ: ವಾಯ್.ಬಿ.ಅಣ್ಣಿಗೇರಿ ಕಾಲೇಜಿನಲ್ಲಿ ಇಂದು ಪ್ರತಿ ವರ್ಷದಂತೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆದವು.
ಕಾಲೇಜು ಆಡಳಿತ ವರ್ಗದವರು ಇದೇ ಸಮಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ 98% ಫಲಿತಾಂಶ ಮಾಡಿ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ತಂದು ಕೊಟ್ಟ ಸಂಜನಾ ಅಶೋಕ ಶಿಂಧೆ ಹಾಗೂ ವಿದ್ಯಾರ್ಥಿನಿಯ ಪಾಲಕರಿಗೆ ಕಾಲೇಜಿನ ಆಡಳಿತ ವರ್ಗದವರು ಗೌರವಿಸಿದರು.

ಕಾಲೇಜಿನ ಚೇರಮನ್ ನಾಗೇಶ ಅಣ್ಣಿಗೇರಿ ಮಾತನಾಡಿ, ಈ ವಿದ್ಯಾರ್ಥಿನಿ ನಮ್ಮ ಕಾಲೇಜಿನ ಹೆಮ್ಮೆ, ಇವಳನ್ನ ಹೆತ್ತ ತಂದೆ ತಾಯಿಗೆ ಎಲ್ಲ ಗೌರವ ಸಲ್ಲಬೇಕು. ಇದೆ ತರಾ ಪ್ರತಿ ವರ್ಷ ಎಲ್ಲ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಹೆಸರನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡ ಹೋಗಬೇಕೆನ್ನುವುದು ನನ್ನ ಉದ್ದೇಶ ಎಂದರು.


Spread the love

Leave a Reply

Your email address will not be published. Required fields are marked *

You may have missed