Posts Slider

Karnataka Voice

Latest Kannada News

ಧಾರವಾಡದ ನಿಂಗರಾಜನ “ಬಡ್ಡಿ” ಆತ್ಮಹತ್ಯೆಯ ಕರಾಳ ಸತ್ಯ ಬಯಲು…

1 min read
Spread the love

ಧಾರವಾಡ: ಬಡ್ಡಿ ಹಣ ನೀಡಿದವರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಗೃಹಸ್ಥನಿಂದ ವಿದ್ಯಾನಗರಿಯಲ್ಲಿ ನಡೆಯುತ್ತಿರುವ ಬಡ್ಡಿ ಮಾಫಿಯಾ ಎಷ್ಟೊಂದು ಕರಾಳತೆಯಿಂದ ತನ್ನ ಕಬಂಧ ಬಾಹುಗಳನ್ನ ವ್ಯಾಪಿಸಿಕೊಂಡಿದೆ ಎಂಬುದು ಬಹಿರಂಗವಾಗಿದೆ.

ನಿಂಗರಾಜ ಎಂಬ ಸಾಮಾನ್ಯ ವರ್ಗದ ವ್ಯಕ್ತಿಯೋರ್ವ ಹೇಗೆ ಬಡ್ಡಿ ಎಂಬ ಬಾಣಲೆಗೆ ಬೀಳುತ್ತಾನೆ ಮತ್ತೂ ಆತನಿಗೆ ಯಾವೆಲ್ಲ ತೊಂದರೆಗಳು ವ್ಯಾಪಿಸಿಕೊಳ್ತವೆ ಎಂಬುದನ್ನ ಆತನೇ ಸಾಯುವ ಮುನ್ನ ಮಾಡಿರುವ ವೀಡಿಯೋ ನೋಡಿದರೇ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂದು ಗಾಬರಿಗೊಳ್ಳಬೇಕಾದ ಸ್ಥಿತಿಯಿದೆ.

ಸಾಯುವ ಮೊದಲು ಕರಾಳತೆ ಬಿಚ್ಚಿಟ್ಟ ನತದೃಷ್ಟ ನಿಂಗರಾಜ

ಬಡ್ಡಿ ಹಣ ಬೇರೆಯವರ ಹೆಸರಿನಲ್ಲಿ ನೀಡಿದನೆನ್ನಲಾದ ಆನಂದ ಪಾಸ್ತೆ, ಅನಿಲ ಪಾಸ್ತೆ, ಏಜೆಂಟ್ ಈರಣ್ಣ ಕುರಿಯವರ, ಸಾಗರ ಕುರ್ತಕೋಟಿ, ಕರೆಣ್ಣನವರ ಎಂಬುವವರು ನಡೆಸಿದ ಮಾಫಿಯಾ ನಿಂಗರಾಜನ ಸಾವಿಗೆ ಕಾರಣವಾಗಿದೆ.

ಇದೀಗ ಆನಂದ ಪಾಸ್ತೆ ಊರು ಬಿಟ್ಟಿದ್ದಾನೆ. ಪೊಲೀಸರು ಇನ್ನುಳುದವರನ್ನ ಹೆಡಮುರಿಗೆ ಕಟ್ಟದೇ ಹೋದರೇ ಧಾರವಾಡದಲ್ಲಿ ಮತ್ತಷ್ಟು ‘ನಿಂಗರಾಜ’ ಸ್ಥಿತಿಗಳು ಬಂದರೂ ಅಚ್ಚರಿಯಿಲ್ಲ.


Spread the love

Leave a Reply

Your email address will not be published. Required fields are marked *