Karnataka Voice

Latest Kannada News

“ಟಿವಿ ಲೋಗೋ ಬಿಟ್ಟು ತೆನೆ ಹೊರೆ”ಯಲಿರುವ ಪತ್ರಕರ್ತ ‘ಮುಸ್ತಫಾ ಕುನ್ನಿಭಾವಿ…

ಧಾರವಾಡ: ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ಅವರು ಅಧಿಕೃತವಾಗಿ ಜಾತ್ಯಾತೀತ ಜನತಾದಳ ಪಕ್ಷವನ್ನ ಸೇರಲು ನಿರ್ಧರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕವಾಯ್ಸ್.ಕಾಂ ಈ ಬಗ್ಗೆ ನಿಖರವಾಗಿ ಹೇಳಿತ್ತು. ಅದೀಗ ದೃಡವಾಗಿದ್ದು, ನವಲಗುಂದ ಕ್ಷೇತ್ರದಲ್ಲಿ ಹೊಸ ಮನ್ವಂತರ ಆರಂಭವಾಗಲಿದೆ.

ಮುಸ್ತಫಾ ಕುನ್ನಿಭಾವಿ ಅವರು ಬರೆದುಕೊಂಡಿರುವ…

ಧಾರವಾಡ ಮಾಧ್ಯಮ ಸ್ನೇಹಿತರಿಗೆ ನಮಸ್ಕಾರ 🙏.

ಆತ್ಮೀಯರೇ, ಕಡೆಗೂ ಮೂಹೂರ್ತ ಕೂಡಿ ಬಂದಿದೆ. ಹೊಸ ರಂಗಕ್ಕೆ ಕಾಲಿಡುವ ಸುಯೋಗ ಸಿಕ್ಕಿದೆ. ಮಾಧ್ಯಮ ಕ್ಷೇತ್ರದಿಂದ ರಾಜಕೀಯ ರಂಗದತ್ತ ಮುಖ ಮಾಡಲು ನಿರ್ಣಯಿಸಿದ್ದೇನೆ.
ಇಷ್ಟು ವರ್ಷಗಳ ಕಾಲ ನಿಮ್ಮ ಜೊತೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು, ನನಗೆ ಖುಷಿ ತಂದಿದೆ. ಧಾರವಾಡ, ಘಟಾನುಘಟಿ ಪತ್ರಕರ್ತರನ್ನು ಹುಟ್ಟುಹಾಕಿದ ನೆಲ. 2007 ರಿಂದ ಇಲ್ಲಿಯವರೆಗೆ ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವದು ನನ್ನ ಸುದೈವ. 23 ವರ್ಷಗಳ ಕಾಲ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡಿದ ನಾನು ಇದೇ ದಿನಾಂಕ 14 ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ.
ಅಂದು ನವಲಗುಂದದಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಜೆಡಿಎಸ್ ಸೇರುತ್ತಿದ್ದೇನೆ.
ವಿಧ್ಯಾರ್ಥಿ ದೆಸೆಯಿಂದ ಹೋರಾಟಗಳನ್ನು ಮಾಡುತ್ತಾ ಬೆಳೆಯುತ್ತಾ ಬಂದ ನನಗೆ ಮಾಧ್ಯಮ ಕ್ಷೇತ್ರ ಆಕರ್ಷಿಸಿತ್ತು. ಇದೀಗ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ನನಗೆ ಹೆಜ್ಜೆ ಹೆಜ್ಜೆಗೂ ನಿಮ್ಮ ಪ್ರೋತ್ಸಾಹ ಬೇಕಾಗಿದೆ. ನನ್ನಿಂದ ನನ್ನ ಮಾತಿನಿಂದ ನಿಮಗೆ ಏನಾದ್ರು ಮನಸ್ಸಗೆ ಬೇಜಾರಾಗಿದ್ದರೆ, ನನ್ನನ್ನು ಮನ್ನಿಸಬೇಕು ಎಂದು ಪ್ರಾರ್ಥಿಸುತ್ತೇನೆ.

ಇಂತಿ ನಿಮ್ಮವ
ಮುಸ್ತಫಾ ಕುನ್ನಿಭಾವಿ
ನವಲಗುಂದ
8861478786

Leave a Reply

Your email address will not be published. Required fields are marked *