Posts Slider

Karnataka Voice

Latest Kannada News

“ಮೂರು ತಾಸಿನ” ಪರವಾನಿಗೆ ಧಾರವಾಡಕ್ಕೆ “ಬರ್ತಿಲ್ಲ ವಿಕೆ ಬಾಸ್”…

Spread the love

ಧಾರವಾಡ: ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಮೂರು ತಾಸಿನ ಪರವಾನಿಗೆ ನೀಡಲಾಗಿತ್ತು. ಈ ಸಮಯ ಸಾಕಾಗಲ್ಲ ಎಂಬ ಕಾರಣಕ್ಕೆ ಧಾರವಾಡ ಜಿಲ್ಲೆಗೆ ಬರುತ್ತಿಲ್ಲವೆಂದು ಗೊತ್ತಾಗಿದೆ.

ಮೂಲತಃ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಕೆಂಪೇಗೌಡರ ಪತ್ನಿ ವಿಜಯಲಕ್ಷ್ಮಿ ಪಾಟೀಲ ಅವರ ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಂಬಂಧಿಯಾಗಿದ್ದಾರೆ. ಕಳೆದ ಐದಾರು ದಿನಗಳಿಂದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯ ಗಂಭೀರವಾಗಿದೆ ಎಂಬ ಕಾರಣಕ್ಕೆ ಧಾರವಾಡ ಜಿಲ್ಲೆಗೆ ಬರಲು ಮಾಜಿ ಸಚಿವ ವಿನಯ ಕುಲಕರ್ಣಿ ಮೂರು ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ, ಮೂರು ಗಂಟೆಗಳಿಗೆ ಮಾತ್ರ ಅವಕಾಶ ಸಿಕ್ಕಿದೆ.

ಈ ಆದೇಶದಿಂದ ಹಿಂದೆ ಸರಿಯಲು ವಿನಯ ಕುಲಕರ್ಣಿಯವರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಹಾಗಾಗಿ ಧಾರವಾಡ ಜಿಲ್ಲೆಯಿಂದ ಸುಮಾರು 398 ದಿನಗಳಿಂದ ದೂರವುಳಿದಿರುವ ಅವರು, ಈಗಲೂ ಬರದಿರುವುದಕ್ಕೆ ತೀರ್ಮಾನ ಮಾಡಿದ್ದಾರೆಂದು ಗೊತ್ತಾಗಿದ್ದು, ಮತ್ತೆ ನ್ಯಾಯಾಲಯದ ಮೊರೆ ಹೋಗಿ ಅವಕಾಶ ಕೆರಳುವ ನಿರೀಕ್ಷೆಯಿದೆ.

 


Spread the love

Leave a Reply

Your email address will not be published. Required fields are marked *