Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಹೃದಯ ವಿದ್ರಾವಕ” ಘಟನೆ… ಕಣ್ಣೀರು… ಕಣ್ಣೀರು…

Spread the love

Exclusive

ಮಗನ ಚಿಕಿತ್ಸೆಗೆಂದು ಬಂದಿದ್ದ ತಾಯಿ ಹೃದಯಾಘಾತದಿಂದ ಸಾವು;ಕಿಮ್ಸ್ ನಲ್ಲಿ ದುರಂತ

ಹುಬ್ಬಳ್ಳಿ: ಸಾವು ಯಾವಾಗ ಯಾರಿಗೆ ಹೇಗೆ ಬರುತ್ತೆ ಅನ್ನೋದು ಗೊತ್ತೇ ಆಗಲ್ಲ ಅದಕ್ಕೆ ಸಾಕ್ಷಿ ಎಂಬಂತೆ ಮಗನ ಚಿಕಿತ್ಸೆಗೆಂದು ಬಂದಿದ್ದ ತಾಯಿಯೊಬ್ಬರು ಆಸ್ಪತ್ರೆಯಲ್ಲಿಯೇ ಹೃದಯಾಘಾತ ಸಂಭವಿಸಿ ಸಾವನಪ್ಪಿದ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ

ಗಾಮನಗಟ್ಟಿಯ ಬಸಮ್ಮ ಎಂಬುವರು ತಮ್ಮ ಮಗನಾದ ಕರೆಪ್ಪನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು ಕಿಮ್ಸ್ ಆಸ್ಪತ್ರೆಗೆ ಕತೆತಂದು ಚಿಕಿತ್ಸೆ ಕೊಡಿಸಲು ಮುಂದಾದಾಗ ವೈದ್ಯರು ಕರೆಪ್ಪನ ಆರೋಗ್ಯ ತಪಾಸಣೆ ನಡೆಸಿ ಕೆಲವೊಂದಿಷ್ಟು ಸ್ಕ್ಯಾನ್ ಮಾಡಿಸಲು ಹೇಳಿದಾಗ ಬಸಮ್ಮ ಸ್ಕ್ಯಾನ್ ನ ಬಿಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಾಗ ಹೃದಯಾಘಾತ ಸಂಭವಿಸಿದೆ

ಕೂಡಲೇ ಬಸಮ್ಮ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾದರು ಕೂಡಾ ಬಸಮ್ಮ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇದನ್ನ ಕಂಡು ಸಾರ್ವಜನಿಕರು, ಆಸ್ಪತ್ರೆಯ ಸಿಬ್ಬಂದಿಗಳು ಕಣ್ಣೀರಾದರು.


Spread the love

Leave a Reply

Your email address will not be published. Required fields are marked *