ಷಡ್ಯಂತ್ರ… ಖಡಕ್ ಅಧಿಕಾರಿ ACP ವಿಜಯ ಬಿರಾದಾರ ವರ್ಗಾವಣೆ ರದ್ದು…!!!!

ಹುಬ್ಬಳ್ಳಿ: ದಕ್ಷ ಅಧಿಕಾರಿ ಎಸಿಪಿ ವಿಜಯ ಬಿರಾದಾರ ಅವರು ಸಿಸಿಆರ್ಬಿಗೆ ಬಂದು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಆದೇಶವನ್ನ ರದ್ದು ಮಾಡುವ ಷಡ್ಯಂತ್ರವನ್ನ ಕೆಲವು ರಾಜಕಾರಣಿಗಳು ಹೆಣೆದಿದ್ದಾರೆಂದು ತಿಳಿದು ಬಂದಿದೆ.

ಅವಳಿನಗರ ಪೊಲೀಸ್ ಇಲಾಖೆಯ ಗೌರವ ಹೆಚ್ಚಿಸುವ ಕೆಲಸ ಮಾಡಲಿದ್ದ ಅಧಿಕಾರಿಯನ್ನ, ಅಧಿಕಾರ ಸ್ವೀಕಾರ ಮಾಡಿದ ನಂತರವೂ ಆದೇಶವನ್ನೇ ರದ್ದು ಮಾಡಿಸುವ ಮೂಲಕ, ದಕ್ಷ ಅಧಿಕಾರಿಗೆ ಮೋಸ ಮಾಡಲಾಗಿದೆ.
ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ರಾಜಕಾರಣಿಯಿಂದಲೇ ಈ ಷಡ್ಯಂತ್ರ ನಡೆದಿದೆ ಎಂದು ಹೇಳಲಾಗಿದ್ದು, ಉತ್ತಮ ಅಧಿಕಾರಿಗಳಿಗೆ ಇದು ಸಕಾಲವಲ್ಲ ಎನ್ನುವಂತಾಗಿದೆ.