ಧಾರವಾಡದಲ್ಲಿ ನಿವೃತ್ತ IPS ಭಾಸ್ಕರ ರಾವ್ರ ಮುಖಕ್ಕೆ ನೋಟು ನಿವಾಳಿಸಿ ಎರಚಿದ ರೌಡಿ ಷೀಟರ್…!!!!

ಧಾರವಾಡ: ನಗರದ ಟೋಲನಾಕಾ ಬಳಿ ನಡೆದ ಖವ್ಹಾಲಿ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಮುಖಕ್ಕೆ ರೌಡಿ ಷೀಟರನೋರ್ವ ನೋಟು ನಿವಾಳಿಸಿ ಎರಚಿದ ಘಟನೆ ನಡೆದಿದೆ.
ಕಾರ್ಯಕ್ರಮದ ವೀಡಿಯೋ ಇಲ್ಲಿದೆ ನೋಡಿ…
ಧಾರವಾಡದ ಶಿವಾನಂದನಗರದಲ್ಲಿ ನಡೆದ ಜುನೇದ ಸುಲ್ತಾನಿ ಖವ್ವಾಲಿ ಕಾರ್ಯಕ್ರಮದ ವೇಳೆ ಭಾರತೀಯ ಜನತಾ ಪಕ್ಷದ ಹಾಲಿ ಶಾಸಕ ಅರವಿಂದ ಬೆಲ್ಲದ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮ ಆರಂಭವಾಗುತ್ತಿದ್ದ ಹಾಗೇ ರೌಡಿ ಷೀಟರ್ ಮಕ್ತುಂ ಸೊಗಲದ ನೋಟನ್ನ ತೆಗೆದು, ಭಾಸ್ಕರ್ ರಾವ್ ಮುಖಕ್ಕೆ ನಿವಾಳಿಸಿ ಜುನೇದ ಸುಲ್ತಾನಿ ಮೇಲೆ ಎರಚಿದ್ದಾನೆ.
ಸಮಾಜದ ಓರೆಕೋರೆಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಕೆಲವರು, ಸಾರ್ವಜನಿಕವಾಗಿ ಹೇಗಿರಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವುದು ಸೋಜಿಗ ಮೂಡಿಸತ್ತೆ.