ಧಾರವಾಡದಲ್ಲಿ ರಸ್ತೆಯುದ್ದಕ್ಕೂ ತುಂಡು ತುಂಡಾಗಿ ದುರ್ಮರಣಕ್ಕೀಡಾದ “ಭಾರತಿ ಭಟ್”…

ಧಾರವಾಡ: ಮನೆಯಿಂದ ಹೊರಟಿದ್ದ ಮಹಿಳೆಯ ಮೇಲೆ ಕಡಿ ತುಂಬಿದ ಟಿಪ್ಪರವೊಂದು ಹರಿದ ಪರಿಣಾಮ, ಮಹಿಳೆಯ ದೇಹವೂ ರಸ್ತೆಯುದ್ದಕ್ಕೂ ತುಂಡು ತುಂಡಾದ ಘಟನೆ ಧಾರವಾಡದ ಹಳೇ ಅಂಚೆ ಕಚೇರಿ ಬಳಿ ನಡೆದಿದೆ.

ಧಾರವಾಡದ ನಾಡಕರ್ಣಿ ಕಂಪೌಂಡ್ ನಿವಾಸಿಯಾಗಿದ್ದ 64 ವರ್ಷದ ಭಾರತಿ ಭಟ್ ಮೃತ ದುರ್ಧೈವಿಯಾಗಿದ್ದಾರೆ. ಕಡಿ ತುಂಬಿದ ಟಿಪ್ಪರ್ ಚಾಲಕ ಎಷ್ಟೊಂದು ವೇಗವಾಗಿ ಚಲಾಯಿಸುತ್ತಿದ್ದ ಎಂಬುದು, ಮಹಿಳೆಯ ದೇಹ ಛಿದ್ರ ಛಿದ್ರವಾಗಿರುವುದನ್ನ ಗಮನಿಸಿದರೇ ಗೊತ್ತಾಗತ್ತೆ.
ಪ್ರಮುಖವಾಗಿ ನಗರದಲ್ಲಿ ಟಿಪ್ಪರಗಳಿಗೆ ಯಾವುದೇ ನಿಯಂತ್ರಣ ಇಲ್ಲವಾಗಿದೆ. ಸರಕಾರದ ನಿಯಮಗಳು ಕೇವಲ ಕಾಗದದಲ್ಲಿ ಮಾತ್ರ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಧಾರವಾಡದ ಈ ಘಟನೆಯಿಂದಾದರೂ ಪೊಲೀಸರು ಎಚ್ಚೆತ್ತುಗೊಳ್ಳಬೇಕಿದೆ.