ಧಾರವಾಡದಲ್ಲಿ “ಅವರ ಪೋಟೋ”ಗೆ ಬೆಂಕಿಯಿಟ್ರಾ ಕಾಂಗ್ರೆಸ್ನವರು…!!!!??

ಧಾರವಾಡ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಭಾವಚಿತ್ರಕ್ಕೆ ಬೆಂಕಿಯಿಟ್ಟಿದ್ದಾರೆಂದು ಆರೋಪಿಸಿ, ಧಾರವಾಡದ ಉಪನಗರ ಪೊಲೀಸ್ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿರುವ ಭಜರಂಗದಳ ಕಾರ್ಯಕರ್ತರು, ತಕ್ಷಣವೇ ತಪ್ಪಿತಸ್ಥರನ್ನ ಬಂಧನ ಮಾಡುವಂತೆ ಆಗ್ರಹಿಸುತ್ತಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಸ್ಥಳಕ್ಕೆ ಎಸಿಪಿ ವಿಜಯಕುಮಾರ ತಳವಾರ ಬಂದರೂ ಕಾರ್ಯಕರ್ತರ ಆಕ್ರೋಶ ಕಡಿಮೆಯಾಗಿಲ್ಲ. ತಪ್ಪು ಮಾಡಿದವರ ಬಂಧನವಾಗದಿದ್ದರೇ ಧಾರವಾಡದಲ್ಲಿ ಬೆಂಕಿ ಹಚ್ಚುವುದಾಗಿ ಭಜರಂಗದಳದ ಪ್ರಮುಖ ಹೇಳಿದ್ದಾರೆ.