ಡಾ.ಚಂದ್ರಶೇಖರ ಗುರೂಜಿ ಹಂತಕರು ಪೊಲೀಸ್ ಕಸ್ಟಡಿಯಲ್ಲಿ ಹೆಂಗಿದ್ದಾರೆ ಗೊತ್ತಾ… Exclusive Video

ಹುಬ್ಬಳ್ಳಿ: ಸರಳವಾಸ್ತು ತಜ್ಞ ಡಾ.ಚಂದ್ರಶೇಖರ ಗುರೂಜಿ ಅವರನ್ನ ಹಾಡುಹಗಲೇ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಚಾಕುವಿನಿಂದ ಇರಿದಿರಿದು ಹತ್ಯೆ ಮಾಡಿರುವ ಹಂತಕರಿಬ್ಬರು ನಿರಾಳತೆಯಿಂದ ಪೊಲೀಸರಿಂದ ತನಿಖೆಗೆ ಒಳಪಡುತ್ತಿದ್ದಾರೆ.
ಹೌದು… ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿರುವ ದೃಶ್ಯಾವಳಿಗಳನ್ನ ನೋಡಿದರೇ, ಹಂತಕರಿಗೆ ಸಣ್ಣದೊಂದು ಪಶ್ಚಾತಾಪವೂ ಕಾಣುತ್ತಿಲ್ಲ. ಅಷ್ಟೊಂದು ನಿರಾಳ ಭಾವ ಅವರಿಬ್ಬರಲ್ಲೂ ಕಾಣುತ್ತಿವೆ.
ಎಕ್ಸಕ್ಲೂಸಿವ್ ವೀಡಿಯೋ
ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ಮಂಜುನಾಥ ಮರೇವಾಡ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಕೊಲೆ ಮಾಡಿದ್ದರೂ, ಅವರಿಬ್ಬರ ಮುಖದಲ್ಲಿ ಅಂತಹ ಯಾವುದೇ ಗುರುತುಗಳು ಕಾಣಲಿಲ್ಲ.
ಮನುಷ್ಯ ಎಷ್ಟೊಂದು ಕ್ರೂರಿಯಲ್ವಾ. ಅಂದ ಹಾಗೇ ಡಾ.ಚಂದ್ರಶೇಖರ್ ಗುರೂಜಿ ಈ ಹಿಂದೆ ಹೇಳಿದ “ಮನುಷ್ಯವೇ ಕೊನೆಯ ಭಯವೇ… ಸಾವು…” ಎಂಬುದು ಸ್ಮರಣಿಕೆ ಬರತ್ತೆ.