Karnataka Voice

Latest Kannada News

ಹುಬ್ಬಳ್ಳಿಯನ್ನ “ಬೆಚ್ಚಿ ಬೀಳಿಸುವ” ಎಕ್ಸಕ್ಲೂಸಿವ್ ನ್ಯೂಸ್…!!!

ಹುಬ್ಬಳ್ಳಿ: ವಾಣಿಜ್ಯನಗರಿ ಎಂದು ಕರೆಯಿಸಿಕೊಳ್ಳುವ ಛೋಟಾ ಬಾಂಬೆಯ ಇತಿಹಾಸದಲ್ಲಿಯೇ ಇಂತಹದೊಂದು ಅಪರಾಧ ಪ್ರಕರಣ ನಡೆದಿರಲಿಲ್ಲ. ಪೊಲೀಸರೇ ದಂಗು ಬಡಿದಿರುವ ಪ್ರಕರಣಗಳು ಸೋಮವಾರವಷ್ಟೇ ಬಯಲಿಗೆ ಬಂದಿದ್ದು, ನಗರದಲ್ಲಿ ನಡೆದಿರುವ ಭಯಾನಕ ಘಟನೆಯನ್ನ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ.

ಈ ಭಾವಚಿತ್ರದಲ್ಲಿ ವಯೋವೃದ್ಧೆಯನ್ನ ಕಳೆದ ತಿಂಗಳು ಕಲಘಟಗಿ ತಾಲೂಕಿನ ಕಾಡನಕೊಪ್ಪದ ಬಳಿ ಕೊಲೆ ಮಾಡಿ, ಸುಟ್ಟು ಹೋಗುವ ಸಮಯದಲ್ಲಿ ಜನ ನೋಡಿದ್ದರಿಂದ ಅರೆಬೆಂದ ಶವ ಅಲ್ಲಿಯೇ ಉಳಿದು ಪೊಲೀಸರಿಗೆ ಯಾವುದೇ ಮಾಹಿತಿ ಸಿಗದೇ ತಲೆನೋವಾಗಿತ್ತು.

ಈ ಘಟನೆ ನಡೆದ ಬರೋಬ್ಬರಿ ತಿಂಗಳ ನಂತರ ಅದೇ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ಮತ್ತೊಂದು ಮಹಿಳೆಯನ್ನ ಕೊಲೆ ಮಾಡಿ, ಸುಟ್ಟು ಹೋಗಲಾಗಿತ್ತು. ಇದರಿಂದ ಮತ್ತಷ್ಟು ತಲೆ ನೋವು ಪೊಲೀಸರಿಗೆ ಎದುರಾಗಿತ್ತು.

ಆದರೆ, ಕಲಘಟಗಿ ಠಾಣೆಯ ಚಾಣಾಕ್ಷ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ನಿರಂತರವಾದ ತನಿಖೆಯಲ್ಲಿ ತೊಡಗಿದಾಗಲೇ, ಹುಬ್ಬಳ್ಳಿ ಜನರು ದಿಗಿಲು ಬೀಳುವ ಸತ್ಯವನ್ನ ಕಂಡು ಹಿಡಿದಿದ್ದಾರೆ.

ಹೌದು… ತಿಂಗಳ ಹಿಂದೆ ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಸಿಕ್ಕಿದ್ದ ದೇಹವೂ ಹುಬ್ಬಳ್ಳಿ ಈಶ್ವರನಗರದ ನಿವಾಸಿ ಇಂದ್ರಾಬಾಯಿ ಪವಾರ ಎಂಬ 58 ವರ್ಷದ ಮಹಿಳೆಯದ್ದೆಂದು ಗೊತ್ತಾಗಿದೆ. ಅಷ್ಟೇ ಅಲ್ಲ, ನಿನ್ನೆ ಕೂಡಾ ಸುಟ್ಟು ಹಾಕಲಾಗಿರುವ ಮಹಿಳೆ ಕೂಡಾ ಇದೇ ಈಶ್ವರನಗರದ ನಿವಾಸಿ ಮಹಾದೇವಿ ನೀಲಮ್ಮನವರದ್ದೆಂದು ಖಚಿತಗೊಂಡಿದೆ. ಇದೀಗ ಪೊಲೀಸರು ಮತ್ತಷ್ಟು ಅವಕ್ಕಾಗಿದ್ದಾರೆ.

ಈ ಎರಡು ಕೊಲೆಗಳ ನಡುವೆ ಹಲವು ಸಾಮ್ಯತೆಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಎರಡು ಕೊಲೆಗಳನ್ನ ಮಾಡಿದ್ದು ಒಂದೇ ತಂಡವೇ ಎಂಬ ಸಂಶಯ ಮೂಡಿದೆ. ಹಾಗಾಗಿಯೇ ಕಲಘಟಗಿ ಠಾಣೆ ಇನ್ಸಪೆಕ್ಟರ್ ಕೌಜಲಗಿ, ಈಶ್ವರನಗರದಲ್ಲಿ ಬೀಡು ಬಿಟ್ಟು ಸುಳಿವು ಪತ್ತೆಗಾಗಿ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *