Posts Slider

Karnataka Voice

Latest Kannada News

‘ಬಿಜೆಪಿ ಲಿಂಪಾ”ಗೆ ಬೆಂಗಳೂರಿಗೆ ಕರೆದು ‘ಬಾಂಬೆ ತೋರಿಸಿದ್ರಾ’ ನಾಯಕರು…!?

1 min read
Spread the love

ಬೆಂಗಳೂರು: ಭಾರತೀಯ ಜನತಾ ಪಕ್ಷದಲ್ಲಿ ಪಕ್ಷನಿಷ್ಠೆ ಹೊಂದಿದವರಿಗೆ ಪಕ್ಷ ಎಂದೂ ಕೈ ಬಿಡುವುದಿಲ್ಲವೆಂಬ ಮಾತು ಇಂದು ಅಕ್ಷರಸಃ ಸತ್ಯವಾಗಿದ್ದು, ವಾಣಿಜ್ಯನಗರಿಯ ನಾಯಕನಿಗೆ ತೀವ್ರ ಹಿನ್ನೆಡೆಯಾಗಿದೆ.

ಸೋಮವಾರ ಸಂಜೆ ‘ನೀವು ಬೆಂಗಳೂರಿಗೆ ಹೊರಟು ಬನ್ನಿ. ನಾಮಿನೇಷನ್ ಮಾಡೋಕೆ ರೆಡಿಯಿರಿ’ ಎಂಬ ಪೋನ್ ಕಾಲ್ ಬಂದಿದ್ದೆ ತಡ, ಬಿಜೆಪಿ ನಾಯಕ ಲಿಂಗರಾಜ ಪಾಟೀಲ ರಾಜಧಾನಿಗೆ ಹೊರಟು ಬಂದಿದ್ದರು.

ಇಂದು ಬೆಳಿಗ್ಗೆ ಮಲ್ಲೇಶ್ವರದ ಪಕ್ಷದ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸುವ ಎಲ್ಲ ಪ್ರಕ್ರಿಗಳನ್ನ ಮಾಡಲು ಲಿಂಗರಾಜ ಪಾಟೀಲ ಮುಂದಾಗಿದ್ರು. ಆದರೆ, ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ಕೊಡದೇ, ಬೇರೆಯವರಿಗೆ ಟಿಕೆಟ್ ನೀಡಿದೆ.

ಬೆಂಗಳೂರಿಗೆ ತಡಬಡಿಸಿ ಹೋಗಿದ್ದ ಲಿಂಗರಾಜ ಪಾಟೀಲರಿಗೆ ಬಿಜೆಪಿ ಟಿಕೆಟ್ ನೀಡದೇ ‘ಬಾಂಬೆ’ ತೋರಿಸಿದೆ. ಇನ್ನೆರಡು ದಿನ ಬಿಟ್ಟು ಮಾಧ್ಯಮಗಳು ಲಿಂಗರಾಜ ಪಾಟೀಲರನ್ನ ‘ಸರ್, ಯಾಕೆ ಹೀಗೆ’ ಪ್ರಶ್ನಿಸುತ್ತಾರೆ. ಆಗ ಮತ್ತೆ ಲಿಂಗರಾಜ ಪಾಟೀಲರು ‘ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಟಿಕೆಟ್ ಕೊಡುತ್ತಾರೆ ಎಂದೂ ನಾನು ಹೇಳಿಯೇ ಇಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ತಾರೆ… ಅಲ್ವೇ…


Spread the love

Leave a Reply

Your email address will not be published. Required fields are marked *