ಹಿಂದೂ-ಮುಸ್ಲಿಂ ಬಾಯಿ ಬಾಯೀ… ನಬಿಸಾಬನಿಗೆ ಕಲ್ಲಂಗಡಿ ಕೊಟ್ಟ ಹೊಸಮಠದ ಮಹಾಸ್ವಾಮೀಜಿ..

ಶ್ರೀರಾಮ ಸೇನೆ ಕಾರ್ಯಕರ್ತರಿಂದ ದೌರ್ಜನ್ಯಕ್ಕೆ ಒಳಗಾದ ಕಲ್ಲಂಗಡಿ ವ್ಯಾಪಾರಸ್ಥ ನಬಿಸಾಬ ಕಿಲ್ಲೆದಾರ ಅವರಿಗೆ ಹಿಂದೂ ಮುಸ್ಲಿಂ ಧರ್ಮಗುರುಗಳಿಂದ ಕಲ್ಲಂಗಡಿ ಹಣ್ಣು ವಿತರಣೆ
ಧಾರವಾಡ: ನುಗ್ಗಿಕೇರಿ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ದೌರ್ಜನ್ಯಕ್ಕೆ ಒಳಗಾದ ಕಲ್ಲಂಗಡಿ ವ್ಯಾಪಾರಸ್ಥ ನಬಿಸಾಬ ಕಿಲ್ಲೆದಾರ್ ಅವರಿಗೆ ಇಂದು ಧಾರವಾಡ ರಾಜೀವ ಗಾಂಧಿ ನಗರದಲ್ಲಿ ಹಿಂದೂ ಮುಸ್ಲಿಂ ಧರ್ಮಗುರು ಸೇರಿ ಕಲ್ಲಂಗಡಿ ಹಣ್ಣನ್ನು ನೀಡಿ ಧೈರ್ಯವನ್ನು ಹೇಳಿದರು.

ಈ ಸಂದರ್ಭದಲ್ಲಿ ಜಗದ್ಗುರು ಚಂದ್ರಶೇಖರ ಮಹಾಸ್ವಾಮಿಜಿ ಹೊಸಮಠ ಹುಬ್ಬಳ್ಳಿ, ಮುಸ್ಲಿಂ ಧರ್ಮ ಗುರುಗಳು ಮೌಲಾನಾ ಹಜರತ್ ಸಯ್ಯದ್ ಅಹ್ಮದ್ ರಜಾ, ಹಜರತ್ ಸಯ್ಯದ್ ನಿಸಾರ್ ಅಹ್ಮದ್ ಚಗನ್,
ಹಜರತ್ ಸಯ್ಯದ್ ಅನ್ಸರ್ ಅಹ್ಮದ್, ಅನ್ಸರ್ ಅಹ್ಮದ್ ಮುಕ್ತಿ , ಕಾಂಗ್ರೆಸ್ ಮುಖಂಡರು ಅಶ್ಪಾಕ್ ಕುಮಟಾಕರ್, ಶ್ರೀನಿವಾಸ್ ಕ್ಯಾರಕಟ್ಟಿ ,ಆಶಾಮ್ ರಾಮದುರ್ಗ ಹಾಗೂ ರಾಜೀವ ಗಾಂಧಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.