Posts Slider

Karnataka Voice

Latest Kannada News

ಮನೆಗಳ್ಳರನ್ನ ರಾಜಸ್ಥಾನದಿಂದ ಎಳೆತಂದ “ಕೇಶ್ವಾಪುರ ಠಾಣೆ ಪೊಲೀಸರು”- 171 ಗ್ರಾಂ ಚಿನ್ನ ವಶ…

1 min read
Spread the love

ಹುಬ್ಬಳ್ಳಿ: ಹಾಡುಹಗಲೇ ಹೊಂಚು ಹಾಕಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ತಂಡವನ್ನ ಪತ್ತೆ ಹಚ್ಚಿ ರಾಜಸ್ಥಾನದಲ್ಲಿ ಮೂವರನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರದ ಆದರ್ಶನಗರ ಸೇರಿದಂತೆ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಬೆಳಗಾವಿಯಲ್ಲಿನ ಮೂರು ಪ್ರಕರಣಗಳು ಬಯಲಿಗೆ ಬಂದಿದ್ದು, ಆರೋಪಿಗಳಿಂದ 171 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ ಸೇರಿದಂತೆ ಸಿಬ್ಬಂದಿಗಳು ಕಾರ್ಯಕ್ಷಮತೆ ಮೆರೆದಿದ್ದು, ಆಯುಕ್ತರು ತಂಡಕ್ಕೆ ಬಹುಮಾನ ಘೋಷಣೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *