Posts Slider

Karnataka Voice

Latest Kannada News

ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಇಷ್ಟೊತ್ತಿಗೆ “ಡಾಕ್ಟರ್ ರಗಳೆ”- ಭಯ ಬೀಳಿಸಿದ ‘ರೂಮರ್’…

Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಆಸ್ಪತ್ರೆಯೊಂದರ ವೈದ್ಯರ ರಗಳೆಯೊಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅದು ಬೇರೆಯದ್ದೆ ಸ್ವರೂಪದ ವದಂತಿಗೆ ಕಾರಣವಾದ ಘಟನೆ ಈಗಷ್ಟೇ ನಡೆದಿದೆ.

ವಿದ್ಯಾನಗರದಲ್ಲಿನ ಆಸ್ಪತ್ರೆ ನಡೆಸುತ್ತಿರುವ ಪ್ರತಿಷ್ಠಿತ ವೈಧ್ಯರನ್ನ ಮಡದಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಠಾಣೆಗೆ ಬಂದು ಕೂತ ವೈದ್ಯ ಕೆಲವೇ ನಿಮಿಷಗಳಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಪೊಲೀಸರು ಕೆರಳಿದ್ದಾರೆ.

ಮಡದಿಯ ಗಲಾಟೆಯ ವಿಷಯಕ್ಕಾಗಿ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸಬೇಕಿದ್ದ ವೈದ್ಯ, ಪೊಲೀಸರನ್ನೇ ‘ಯೂಸ್ ಲೆಸ್ ಪೆಲೋ’ ಎಂದು ಹೀಯಾಳಿಸಿದ್ದಾರೆ. ಆಗ, ಠಾಣೆಯಲ್ಲಿದ್ದವರು ಚೆನ್ನಾಗಿಯೇ ‘ಪೂಜೆ’ ಮಾಡಿ ಹೊರ ಹಾಕಿದ್ದಾರೆ.

ಇದು ಒಂದು ಕಡೆ ನಡೆಯುತ್ತಿದ್ದರೇ ಕೆಲವರು ವೈದ್ಯರಿಗೆ ಏನೋ ಆಗಿದೆ ಎಂದು ರೂಮರ್ ಹಬ್ಬಿಸಲಾಗಿತ್ತು. ಆದರೆ, ಅಸಲಿಯತ್ತು ಮೇಲೇಳಿದ್ದಷ್ಟೇ.


Spread the love

Leave a Reply

Your email address will not be published. Required fields are marked *