ಹಿರೇಮಲ್ಲಿಗವಾಡದಲ್ಲಿ ಮಹಿಳೆ ಕೈ ಮುರಿದ “ಕೌಶಲ್ಯ”- ಗ್ರಾಮೀಣ ಠಾಣೆಯಲ್ಲಿ ‘ಎಫ್ಐಆರ್’…
1 min readಧಾರವಾಡ: ಕೊಟ್ಟ ಹಣವನ್ನ ಮರಳಿ ಕೇಳಲು ಹೋದ ಸಮಯದಲ್ಲಿ ಮಹಿಳೆಯೋರ್ವಳು ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವ ಪ್ರಕರಣ ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.
ಸುಶೀಲವ್ವ ಹನಮಂತಪ್ಪ ಚೌವರದ ಎಂಬ ಮಹಿಳೆಯೇ ಹಲ್ಲೆಗೊಳಗಾಗಿದ್ದು, ಎರಡು ಕೈಗೆ ಗಾಯಗಳಾಗಿವೆ. ಕೌಶಲ್ಯ ಸುಭಾಸ ಪಾಟೀಲ ಎಂಬುವವರೇ ಹಲ್ಲೆ ಮಾಡಿದ್ದಾರೆ.
ಸುಶೀಲವ್ವ ಎಂಬುವವರು ಎರಡು ಲಕ್ಷ ರೂಪಾಯಿ ಹಣವನ್ನ ಕೌಶಲ್ಯ ಎಂಬುವವರಿಗೆ ಕೈಗಡವಾಗಿ ನೀಡಿದ್ದರು. ಅದನ್ನ ಕೇಳಲು ಹೋದಾಗ ಘಟನೆ ನಡೆದಿದೆ.
ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.