Posts Slider

Karnataka Voice

Latest Kannada News

‘ಎಲ್ಲೋ ಕೊಲೆ ಮಾಡಿ’ ಕ್ಯಾರಕೊಪ್ಪದ ಬಳಿಯ ರೇಲ್ವೆ ಹಳಿಯಲ್ಲಿ ಹಾಕಿದ ದುಷ್ಕರ್ಮಿಗಳು….!

Spread the love

ಧಾರವಾಡ: ವ್ಯಕ್ತಿಯೋರ್ವನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ, ರೇಲ್ವೆ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆಂದು ಬಿಂಬಿಸಲು ಯತ್ನಿಸಿದ ಪ್ರಕರಣವೊಂದು ಕ್ಯಾರಕೊಪ್ಪ-ಮುಗದ ರೇಲ್ವೆ ಮಾರ್ಗದಲ್ಲಿ ಪತ್ತೆಯಾಗಿದೆ.

ಸುಮಾರು 45 ವರ್ಷದ ವ್ಯಕ್ತಿಯನ್ನ ಮೊದಲೇ ಹೊಡೆದು ಕೊಲೆ ಮಾಡಲಾಗಿದೆ. ತೀವ್ರವಾದ ರಕ್ತಸ್ರಾವವಾದ ಮೇಲೆ ರೇಲ್ವೆ ಹಳಿಯಲ್ಲಿ ಹಾಕಿ, ಆರೋಪಿಗಳು ಪರಾರಿಯಾಗಿದ್ದಾರೆ.

ರೇಲ್ವೆ ಮಾರ್ಗದಲ್ಲಿ ವ್ಯಕ್ತಿಯೋರ್ವನ ಶವ ಬಿದ್ದಿರುವ ಬಗ್ಗೆ ರೇಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾಗಿರುವ ವ್ಯಕ್ತಿಯ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲವಾದ್ದರಿಂದ, ಕೊಲೆಗೆಡುಕರ ಬಗ್ಗೆಯೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *