ಮಾಜಿ ಸಚಿವ ಸಂತೋಷ ಲಾಡ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಕ್ಷಣಗಣನೆ…
1 min readಕೆಎಎಸ್ ಆಕಾಂಕ್ಷಿಗಳ ಪೈಕಿ 1ಲಕ್ಷ 8 ಸಾವಿರ ಅಭ್ಯರ್ಥಿಗಳು ರಜಿಸ್ಟರ್ ಮಾಡಿದ್ದು, ಶಿಕ್ಷಣಕ್ಕಾಗಿ ಸಂತೋಷ ಲಾಡ ಕೋಟಿಗಟ್ಟಲೇ ಹಣ ಹಾಕಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಹೊಸ ಭರವಸೆಯನ್ನ ಮೂಡಿಸಿದೆ.
ಧಾರವಾಡ: ಶಿಕ್ಷಣಕ್ಕೆ ಒತ್ತು ನೀಡುವ ಮತ್ತು ಕೆಎಎಸ್ ತರಬೇತಿಯಿಂದ ವಂಚಿತರಾಗುವ ಆಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ಕೊಡುವ ತರಗತಿಗಳು ನಾಳೆಯಿಂದ ಆರಂಭಿಸಲು ಮಾಜಿ ಸಚಿವ ಸಂತೋಷ ಲಾಡ ಪೌಂಡೇಷನ್ ಕ್ಷಣಗಣನೆಯಲ್ಲಿದೆ.
ಇಂದು ಧಾರವಾಡಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸಂತೋಷ ಲಾಡ, ತಾವು ಗ್ರಾಮೀಣ ಭಾಗದಿಂದ ಬಂದಿರುವುದರಿಂದ ಇಂತಹ ಯೋಜನೆ ಜಾರಿ ಮಾಡಲು ಮುಂದಾಗುತ್ತಿದ್ದೇವೆ ಎಂದರು.
ಇದೇ ಸಮಯದಲ್ಲಿ ಮಾಜಿ ಸಚಿವ ಸಂತೋಷ ಲಾಡ ಮಾತನಾಡಿ, ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದರು.
ಸಚಿವ ಆನಂದ ಸಿಂಗ್ ಅವರು ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿರುವುದಕ್ಕೆ ಈಗಾಗಲೇ ಇಬ್ಬರೂ ಸ್ಪಷ್ಟನೆ ಕೊಟ್ಟಿದ್ದಾರೆ. ಆನಂದ ಸಿಂಗ್ ಅವರು ಮರಳಿ ಕಾಂಗ್ರೆಸ್ ಸೇರುತ್ತಾರೋ ಇಲ್ಲವೋ ಎಂಬುದನ್ನು ಅವರನ್ನೇ ಕೇಳಬೇಕು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿಯನ್ನೇ ನೀಡುತ್ತಿರಲಿಲ್ಲ ಎಂಬ ವಿಚಾರ ಮುನ್ನೆಲೆ ಬಂದಿತ್ತು. ಈಗ ನನ್ನ ತಪ್ಪನ್ನು ನಾನು ತಿದ್ದಿಕೊಂಡಿದ್ದೇನೆ. ತಿಂಗಳಲ್ಲಿ ಎಂಟು, ಹತ್ತು ದಿನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬರಲಿದೆ. ನಾನು ಕೂಡ ಕಲಘಟಗಿಯಿಂದಲೇ ಸ್ಪರ್ಧೆ ಮಾಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.