Posts Slider

Karnataka Voice

Latest Kannada News

ಹುಬ್ಬಳ್ಳಿಯ ‘ತಲ್ವಾರ ಕೇಸ್’ಲ್ಲಿ ‘ಗಡಿಗೆ’ ಒಡೆಯದಿರುವುದಕ್ಕೆ ಕಾರಣವೇನು… ದಕ್ಷ ಅಧಿಕಾರಿಯ ಹಿಂದೇಟು…?

Spread the love

ಹುಬ್ಬಳ್ಳಿ: ರಾತ್ರೋರಾತ್ರಿ ತಲ್ವಾರ ಸಮೇತ ಹಿಡಿದ ಆರೋಪಿಗಳನ್ನ ಠಾಣೆಗೆ ತಂದು ಕಳಿಸಿ, ಡ್ರಾಮಾ ಮಾಡಿದ ಮಹಾನ್ ಕಲಾವಿದ ‘ಗಡಿಗೆಯಣ್ಣ’ ಬಚಾವಾಗಿದ್ದು ಹೇಗೆ ಎಂಬ ಪ್ರಶ್ನೆಯನ್ನ ಪ್ರತಿಯೊಬ್ಬರು ಕೇಳುವಂತಾಗಿದೆ.

ಕೃಷ್ಣಾನಗರದಲ್ಲಿ ಆಟೋದಲ್ಲಿ ಯುವಕರ ಗುಂಪೊಂದು ದಾಂಧಲೆ ಮಾಡುವ ಉದ್ದೇಶದಿಂದಲೇ ಬಂದಾಗಲೇ, ಎಎಸ್ಐವೊಬ್ಬರು ಅವರನ್ನ ಹಿಡಿದು ತಂದಿದ್ದರು. ಆದರೆ, ಮಹಾನ್ ಕಲಾವಿದ ಗಡಿಗೆಯಣ್ಣ ಅವರೆಲ್ಲರನ್ನ ಮನೆಗೆ ಕಳಿಸಿ, 161 ಮಾಡಿಕೊಂಡಿದ್ದ.

ಈ ವಿಷಯ ಕರ್ನಾಟಕವಾಯ್ಸ್.ಕಾಂನಲ್ಲಿ ಹೊರಬಿದ್ದ ತಕ್ಷಣವೇ ಗಡಿಗೆಯಣ್ಣ ರಾತ್ರೋರಾತ್ರಿ ಜಾಗೃತರಾಗಿ ಗಡಿಗೆಯಲ್ಲಿನ ಮೊಸರು ಬಾಯಿಗೆ ಹತ್ತಿದ್ದರೂ ಕಾಣದಂತೆ ಎಲ್ಲವನ್ನೂ ಮಾಡಿ ಮುಗಿಸಿದ್ದರು. ಅಷ್ಟೇ ಅಲ್ಲ, ‘ಯಾರೂ ಏನೂ ಮಾಡೋಕೆ ಆಗಲ್ಲ’ ಎಂದು ರಾತ್ರಿ ಒದರಿದ್ದರು.

ಈ ವಿಷಯ ದಕ್ಷ ಅಧಿಕಾರಿಗೆ ಗೊತ್ತಿದ್ದರೂ, ಕಾರಣವೇ ಇಲ್ಲದ ಪೊಲೀಸ್ ನನ್ನ ಅಮಾನತ್ತು ಮಾಡಿಸಿ, ತಾವೂ ಕಾವಾ-ವಾಚಾ-ಮನಸಾ ಶುದ್ಧರು ಎಂದು ತೋರಿಸಿಕೊಟ್ಟಿದ್ದರು.

ಆದರೆ, ಅಸಲಿ ಸಮಸ್ಯೆ ಹಾಗೇಯೇ ಉಳಿದಿದೆ. ಇದೀಗ ‘ಗಡಿಗೆಯಣ್ಣ’ ನಾನು ಮ್ಯಾಲನವರಿಗೆ ಸರಿ ಮಾಡೇನಿ’ ಎಂದು ತನ್ನೇರಿಯಾದಲ್ಲಿ ಬಾಯಿ ಬಾಯಿ ಬಡಿದುಕೊಂಡಿದ್ದಾನಂತೆ. ಹೌದಾ.. ದಕ್ಷ ಅಧಿಕಾರಿ ಯಾವ ರೀತಿ ಸರಿ ಮಾಡಿಕೊಂಡರೋ… ಶ್ರೀರಾಮನೇ ಉತ್ತರ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *