Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲೊಂದು “ಆಪ್ ರೇಷನ್ ಅಂತ”- ಹೆಬ್ಬಟ್ಟಿನ ಉಗುರು ತೆಗೆದು ಕ್ರೂರಿಗಳು…!

Spread the love

ಹುಬ್ಬಳ್ಳಿ: ವಾಣಿಜ್ಯನಗರದಲ್ಲೊಂದು ಮನುಷ್ಯನ ಕ್ರೂರತನ ಬಿಂಬಿಸುವ ಘಟನೆಯೊಂದು ನಡೆದಿದ್ದು, ಮಾನವಂತರು ಬೀದಿಯಲ್ಲಿ ಬಂದು ನಿಲ್ಲುವಂತಾಗಿರುವುದಕ್ಕೆ ಕಾರಣವಾಗಿದ್ದು ಮಾತ್ರ ಮಗನ ಪ್ರೀತಿ.

ಹೌದು.. ಕಳೆದ ಐದಾರೂ ವರ್ಷದಿಂದ ಪ್ರೀತಿ ಬಲೆಯಲ್ಲಿ ಬಿದ್ದಿದ್ದ ನವನಗರದ ನಂದೀಶ್ವರನಗರದ ಯುವಕ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹುಡುಗಿಯನ್ನ ಪ್ರೀತಿಸುತ್ತಿದ್ದ. ಅದೇ ಕಾರಣಕ್ಕೆ ಕಳೆದ ಡಿಸೆಂಬರ್ 29ರಂದು ಅವರಿಬ್ಬರು ಮನೆ ಬಿಟ್ಟು ಹೋಗಿದ್ದರು. ಅಷ್ಟೇ, ಆದರೆ, ಅನುಭವಿಸಿದ್ದು ಯುವಕನ ತಂದೆ. ಏನಾಯ್ತು.. ಅವರೇ ಹೇಳ್ತಾರೆ ಕೇಳಿ..

ನೂರಅಹ್ಮದ್ ಪುತ್ರ ಸುಬಾನಿ ಬ್ಯಾಹಟ್ಟಿ ಮತ್ತು ಆತಿಯಾ ಕಿತ್ತೂರು ನಡುವೆ ಪ್ರೇಮವಿತ್ತು. ಈ ಹಿನ್ನೆಲೆಯಲ್ಲಿ ಯುವತಿಯರ ಮನೆಯವರಿಂದ ಯುವಕನ ತಂದೆಯನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡಲಾಗಿದೆ. ಟಾಟಾ ಸುಮೋದಲ್ಲಿ ಕಿಡ್ನಾಪ್ ಮಾಡಿ ಹುಬ್ಬಳ್ಳಿ ಹೊರಹೊಲಯದ ಪ್ರದೇಶದಲ್ಲಿ ಕಾಲಿನ ಉಗುರು ಕಿತ್ತು ಚಿತ್ರಹಿಂಸೆ ನೀಡಲಾಗಿದೆ.

ಈ ಬಗ್ಗೆ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಇಬ್ರಾಹಿಂ ಖಾನ್ ಕಿತ್ತೂರ, ಇಲಿಯಾಸ್ ಕಿತ್ತೂರ, ಶಬ್ಬೀರ್ ಬೆಟಗೇರಿ, ಸಲ್ಮಾ ಕಿತ್ತೂರ, ಹೀನಾ ಕಿತ್ತೂರ ಬಂಧಿಸಲಾಗಿದೆ. ಆದರೆ, ಮಾನವೀಯತೆ ಎಲ್ಲಿಗೆ ಬಂತು ಎಂಬುದು ಸೋಜಿಗ ಮೂಡಿಸುತ್ತೆ.


Spread the love

Leave a Reply

Your email address will not be published. Required fields are marked *