ಕರ್ನಾಟಕದ ಪ್ರತಿಯೊಬ್ಬ ಸರಕಾರಿ ಶಾಲೆ ಶಿಕ್ಷಕ ನೋಡಲೇಕಾದ ವೀಡಿಯೋ…

ವಿಜಯಪುರ: ಸರಕಾರಿ ಶಾಲೆಗೆ ಮಕ್ಕಳನ್ನ ಕಳಿಸಲು ಪಾಲಕರು ಯಾಕೆ ಹಿಂದೇಟು ಹಾಕುತ್ತಾರೆ ಎಂಬುದಕ್ಕೆ ಉದಾಹರಣೆಯೊಂದು ಸಿಕ್ಕಿದ್ದು, ಇಡೀ ಸರಕಾರಿ ಶಾಲೆ ಶಿಕ್ಷಕರು ಗಮನಿಸಲೇಬೇಕಾದ ಮಾಹಿತಿಯಿದು.
ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ರಾಂಪೂರಮಠ ಅವರಿಗೆ ಎಬಿಸಿಡಿ ಬರೆಯಲು ಬರುತ್ತಿಲ್ಲ. ಗ್ರಾಮಸ್ಥರ ಮುಂದೆ ಶಿಕ್ಷಕ ಮಾಡಿದ ಅಜ್ಞಾನವನ್ನೊಮ್ಮೆ ನೋಡಿ.
ಸರಕಾರಿ ಶಾಲೆ ಶಿಕ್ಷಕರ ಬಗ್ಗೆ ಅಸಹ್ಯ ಮೂಡಿಸುವ ಸ್ಥಿತಿಯನ್ನು ರಾಂಪೂರಮಠ, ಹುಟ್ಟಿ ಹಾಕಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.