Posts Slider

Karnataka Voice

Latest Kannada News

ದಕ್ಷ ಅಧಿಕಾರಿ ಡಿಸಿಪಿ ಕೆ.ರಾಮರಾಜನ್ ವರ್ಗಾವಣೆ…!

1 min read
Spread the love

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ದಕ್ಷ ಅಧಿಕಾರಿಯಾಗಿದ್ದ ಡಿಸಿಪಿ ಕೆ.ರಾಮರಾಜನ್ ಅವರನ್ನ ವರ್ಗಾವಣೆ ಮಾಡಿ, ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಕೆ.ರಾಮರಾಜನ್ ಅವರನ್ನ ಬೆಂಗಳೂರು ಶಹರ ಕಮಾಂಡ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿದೆ. ನೂತನವಾಗಿ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿ ಸಾಹಿಲ್ ಭಾಗ್ಲಾ ಅವರನ್ನ ವರ್ಗಾವಣೆ ಮಾಡಲಾಗಿದೆ.

ಕಳೆದ ರಾತ್ರಿಯ ವರ್ಗಾವಣೆ ಆದೇಶ ಬಂದಿದ್ದು, ಇಂದು ಕೆ.ರಾಮರಾಜನ್ ಅವರು ಅಧಿಕಾರವನ್ನ ಹಸ್ತಾಂತರ ಮಾಡಲಿದ್ದಾರೆ. ಅವಳಿನಗರದಲ್ಲಿ ತಮ್ಮದೇ ಆದ ರೀತಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡುವಲ್ಲಿ ಕೆ.ರಾಮರಾಜನ್ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಪಿ ವಿರುದ್ಧ ಆಡಳಿತ ಪಕ್ಷದವರೇ ಹರಿಹಾಯ್ದಿದ್ದರು. ಅದೇ ಕಾರಣಕ್ಕೆ ಡಿಸಿಪಿಯವರನ್ನ ವರ್ಗಾವಣೆ ಮಾಡಲಾಯಿತಾ ಎಂಬ ಪ್ರಶ್ನೆ ಮೂಡಿದೆ.


Spread the love

Leave a Reply

Your email address will not be published. Required fields are marked *