ರಸ್ತೆಯಲ್ಲಿ ಮೊಸಳೆಯೂ, ಮೊಲ ನುಂಗಿದ ಹೆಬ್ಬಾವು… ವಿಜಯದಶಮಿಯಂದೇ ಕರ್ನಾಟಕದಲ್ಲಿ….!

ಬೆಂಗಳೂರು: ರಾಜ್ಯದಲ್ಲಿ ವಿಜಯದಶಮಿಯ ಸಡಗರ ಮನೆ ಮಾಡಿದಾಗಲೇ ಎರಡು ಪ್ರಮುಖ ಘಟನೆಗಳು ರಾಜ್ಯದಲ್ಲಿ ನಡೆದಿದ್ದು, ನೋಡುಗರಲ್ಲಿ ಅಚ್ಚರಿಯನ್ನೂ, ಜೋತಿಷ್ಯರಲ್ಲಿ ಆತಂಕವನ್ನೂ ಮೂಡಿಸಿದೆ.
ಆ ದೃಶ್ಯಗಳನ್ನ ಮೊದಲು ನೋಡಿ ಬಿಡಿ..
ತುಮಕೂರಿನಲ್ಲಿ ಹೆಬ್ಬಾವೊಂದು ಮೊಲವನ್ನ ನುಂಗಿ ಸಂಕಟ ಪಡುತ್ತ ಮತ್ತೆ ಅದನ್ನ ಹೊರಗೆ ಹಾಕಿದ ಘಟನೆ ನಡೆದಿದೆ. ಬಾಗಲಕೋಟೆಯ ಆಲಮಟ್ಟಿ ಬಳಿಯಲ್ಲಿ ಮೊಸಳೆಯೊಂದು ರಸ್ತೆಗೆ ಬಂದು ಆತಂಕ ಮೂಡಿಸಿದೆ.
ಈ ಎರಡು ಪ್ರಕರಣಗಳು ನೋಡುಗರಲ್ಲಿ ಅಚ್ಚರಿ ಆತಂಕವನ್ನ ಮೂಡಿಸಿದೆ. ಆದರೆ, ಜೋತಿಷ್ಯರಲ್ಲಿ ಇದು ಕೆಡುಗಾಲದ ಲಕ್ಷಣಗಳು ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಅದೇನೂ ನಡೆಯುತ್ತೋ ಕಾದು ನೋಡಬೇಕಿದೆ.