ಹುಬ್ಬಳ್ಳಿಯ ಸೋತ ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ 16 ಜನರ ಮೇಲೆ ಎಫ್ಐಆರ್…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಸೋಲು ಅನುಭವಿಸಿದ್ದಕ್ಕೆ ಎಐಎಂಐಎಂ ಅಭ್ಯರ್ಥಿಯೇ ಕಾರಣವೆಂದು ಮನೆ ಹಾಗೂ ಮನೆಯಲ್ಲಿದ್ದ ಹಲವರ ಮೇಲೆ ಹಲ್ಲೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ ಹದಿನಾರು ಜನರ ಮೇಲೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆದಿದ್ದು ಹೇಗೆ.. ಹೇಳಿದ್ದಾರೆ ಕೇಳಿ…
ಕರ್ಕಿ ಬಸವೇಶ್ವರ ನಗರದಲ್ಲಿರುವ ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಪತ್ನಿಯೂ ಸೇರಿದಂತೆ ಮನೆಯಲ್ಲಿದ್ದ ಹಲವರ ಮೇಲೆ ಶ್ರೀನಿವಾಸ ಬೆಳದಡಿ ಸೇರಿದಂತೆ ಹಲವರು ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲ, ಮನೆಯ ಮುಂದಿನ ಬೈಕ್ ಒಡೆದು ಹಾಕಿದ್ದರು.

ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಒಟ್ಟು 16 ಜನರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಬೆಂಡಿಗೇರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.