Posts Slider

Karnataka Voice

Latest Kannada News

ಶಾಸಕ ಪ್ರಸಾದ ಅಬ್ಬಯ್ಯಗೆ “ಗುಮ್ಮಿದ” ಮೋಹನ ಅಸುಂಡಿ…!

Spread the love

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಮೋಹನ ಅಸುಂಡಿಯವರು 82ನೇ ವಾರ್ಡಿನಲ್ಲಿ ತಮ್ಮ ಪತ್ನಿಗಾಗಿ ಟಿಕೆಟ್ ಕೇಳಿದ್ದರೂ, ಸ್ಥಳೀಯ ಶಾಸಕರಾಗಿದ್ದ ಪ್ರಸಾದ ಅಬ್ಬಯ್ಯ ತೀವ್ರ ವಿರೋಧ ಮಾಡಿದ್ದರ ಹಿನ್ನೆಲೆಯಲ್ಲಿ ಟಿಕೆಟ್ ವಂಚಿತರಾಗಿದ್ದರೂ, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರುವಲ್ಲಿ ಮೋಹನ ಅಸುಂಡಿ ಯಶಸ್ವಿಯಾಗಿದ್ದಾರೆ.

ಸದಾಕಾಲ ಕಾಂಗ್ರೆಸ್ ನಲ್ಲಿಯೇ ಇದ್ದರೂ ಕೊನೆ ಗಳಿಗೆಯಲ್ಲಿ, ಮೋಹನ ಅಸುಂಡಿಯವರು ಪರಿಚಯಿಸಿದ ವಿಜನಗೌಡರ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಪಾಲಿಕೆಯಲ್ಲಿ ಮಾಜಿ ಸದಸ್ಯರಾಗಿದ್ದ ಮೋಹನ ಅಸುಂಡಿಯವರು, ತಮ್ಮ ಪತ್ನಿಯನ್ನ ಪಕ್ಷೇತರನ್ನಾಗಿ ಕಣಕ್ಕೀಳಿಸಿದ್ದರು. ಅಷ್ಟೇ ಅಲ್ಲ, ಬಹುಮತದಿಂದ ಗೆದ್ದುಕೊಂಡು ಬರುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿದ್ದ ಅಕ್ಷತಾ ಮೋಹನ ಅಸುಂಡಿಯವರು, ಒಂದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಸುಂಡಿಯವರನ್ನ ಹತ್ತಿಕ್ಕಲು ಹಲವರು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದರಾದರೂ, ಜಯಮಾಲೆ ಮಾತ್ರ ಅಸುಂಡಿಯವರಿಗೆ ಲಭಿಸಿದೆ.

ಹಾಲಿ ಶಾಸಕ ಪ್ರಸಾದ ಅಬ್ಬಯ್ಯವರಿಗೆ, ಈ ಮೂಲಕ ತೀವ್ರ ಹಿನ್ನೆಡೆಯಾಗಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಕಾರ್ಯಕರ್ತರು ಕೈ ಬಿಡುವುದಿಲ್ಲವೆಂಬುದನ್ನ ಈ ಮೂಲಕ ತೋರಿಸಿಕೊಡಲಾಗಿದೆ.


Spread the love

Leave a Reply

Your email address will not be published. Required fields are marked *