Karnataka Voice

Latest Kannada News

ಸೆಪ್ಟಂಬರ್ 6ರಿಂದ ಶಾಲೆಗಳು ವಾರಕ್ಕೆ ಐದು ದಿನ ಓಪನ್…!

ಬೆಂಗಳೂರು: ಸೆಪ್ಟಂಬರ್ 6ರಿಂದ ಕೋವಿಡ್ ನಿಯಮಾವಳಿಗಳ ಪ್ರಕಾರ 6,7,8 ತರಗತಿಯನ್ನ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ಸಚಿವ ಆರ್.ಅಶೋಕ ಹೇಳಿದರು.

ಸಭೆಯ ನಂತರ ಮಾಹಿತಿ ನೀಡಿದ ಸಚಿವ ಆರ್.ಅಶೋಕ, ವಾರದಲ್ಲಿ ಐದು ಮಾತ್ರ ಶಾಲೆಗಳನ್ನ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಇನ್ನುಳಿದ ಎರಡು ದಿನದಲ್ಲಿ ಸ್ವಚ್ಛತೆಗಾಗಿ ಮೀಸಲಿಡಲಾಗಿದೆ ಎಂದರು.

ತಜ್ಞರ ಜೊತೆ ಮಾತುಕತೆ ಮಾಡಿದ ನಂತರ ತೀರ್ಮಾನಗಳನ್ನ ತೆಗೆದುಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸೂಕ್ತ ಕ್ರಮವನ್ನ ಜರುಗಿಸಲಾಗಿದೆ. ಪ್ರಾಥಮಿಕ ಶಿಕ್ಷಣವನ್ನ ಆರಂಭಿಸುವ ಬಗ್ಗೆ ಇನ್ನೂ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *