ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರಿಗೆ ಗೃಹ ಇಲಾಖೆಯ ಪ್ರಶಸ್ತಿ…!

ಹುಬ್ಬಳ್ಳಿ: ಕಾನೂನು ಪಾಲನೆಯಲ್ಲಿ ಅತ್ಯುತ್ತಮ ತನಿಖೆಯನ್ನ ಮಾಡಿದ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರದ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಪ್ರಮುಖವಾಗಿ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರಿಗೂ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ಡಿವೈಎಸ್ಪಿ ಪರಮೇಶ್ವರ ಅನಂತ ಹೆಗಡೆ, ಬೆಂಗಳೂರಿನ ಸಿಸಿಬಿಯಲ್ಲಿರುವ ಎಸಿಪಿ ಎಚ್.ಎನ್.ಧರ್ಮೆಂದ್ರ, ಬೆಂಗಳೂರಿನ ಬಿಡಿಎ ಎಸ್ ಟಿಎಫ್ ಡಿವೈಎಸ್ಪಿ ಸಿ.ಬಾಲಕೃಷ್ಣ, ಬೆಂಗಳೂರು ಕೆಎಲ್ಎ ಎಸ್ಐಟಿಯ ಪೊಲೀಸ್ ಇನ್ಸಪೆಕ್ಟರ್ ಮನೋಜ ಹೋವಲೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸರ್ಕಲ್ ಇನ್ಸಪೆಕ್ಟರ್ ಟಿ.ವಿ.ದೇವರಾಜ ಹಾಗೂ ಹಳೇಹುಬ್ಬಳ್ಳಿ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರಿಗೆ ಈ ಅವಾರ್ಡ್ ಲಭಿಸಿದೆ.

ಹುಬ್ಬಳ್ಳಿಯಲ್ಲಿ ಹಾಡುಹಗಲೇ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯೊಂದರಲ್ಲಿ ಪ್ರತಿಯೊಂದು ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದ ಶಿವಾನಂದ ಕಮತಗಿಯವರ ಕಾರ್ಯಕ್ಕೆ ಗೃಹ ಇಲಾಖೆಯ ಪ್ರಶಸ್ತಿ ಸಿಕ್ಕಿರುವುದು ಹುಬ್ಬಳ್ಳಿ-ಧಾರವಾಡ ಪೊಲೀಸರ ಕಾರ್ಯವನ್ನ ಬಿಂಬಿಸುತ್ತಿದೆ.