Posts Slider

Karnataka Voice

Latest Kannada News

ಧಾರವಾಡ -71ರ ಪ್ರತಿ ಗ್ರಾಮದಲ್ಲಿ “ವಿಕೆ ಅಭಿಮಾನಿಗಳಿಂದ” ಪಟಾಕಿ ಹಚ್ಚಿ ಸಂಭ್ರಮ…!

1 min read
Spread the love

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಗೆ ಕೊನೆಗೂ ಜಯ ಸಿಕ್ಕಿದ್ದು, ಸುಪ್ರೀಂಕೋರ್ಟ್ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ.

ಜಾಮೀನು ಸಿಕ್ಕಿದೆ ಎಂದು ಗೊತ್ತಾದ ತಕ್ಷಣವೇ ವಿನಯ ಕುಲಕರ್ಣಿಯವರ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಪಟಾಕಿಗಳನ್ನ ಹಚ್ಚಿ ಸಂಭ್ರಮಿಸಿದರು. ಅಷ್ಟೇ ಅಲ್ಲ, ವಿನಯ ಕುಲಕರ್ಣಿಯವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಧಾರವಾಡದಲ್ಲಿನ ವಿನಯ ಕುಲಕರ್ಣಿಯವರ ಮನೆಯ ಮುಂದೆಯೂ ಪಟಾಕಿಗಳನ್ನ ಹಚ್ಚಿ ಸಡಗರವನ್ನ ಕಾರ್ಯಕರ್ತರು ಆಚರಿಸಿಕೊಂಡರು. ಕಾರ್ಯಕರ್ತರ ಬಹುದಿನಗಳ ಬೇಡಿಕೆ ಈಡೇರಿದ್ದು, ಇಂದು ಎಲ್ಲರಲ್ಲೂ ಹಬ್ಬದ ವಾತಾವರಣವನ್ನ ಸೃಷ್ಟಿ ಮಾಡಿದೆ.

ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ 302 ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, ಸಾಕ್ಷ್ಯ ನಾಶ ಪ್ರಕರಣದಲ್ಲಿಯೂ ಜಾಮೀನು ಸಿಗಬೇಕಿದೆ.


Spread the love

Leave a Reply

Your email address will not be published. Required fields are marked *

You may have missed