Karnataka Voice

Latest Kannada News

ಶಿಕ್ಷಣ ಸಚಿವ ಸುರೇಶಕುಮಾರಗೆ ಕೊಕ್… ಶಿಕ್ಷಣಕ್ಕೆ ಹೊಸ ಸಚಿವರಂತೆ…!?

ಬೆಂಗಳೂರು: ನೂತನವಾಗಿ ಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಗಿಯುತ್ತಿದ್ದ ಹಾಗೇ ಹಲವು ಮಂತ್ರಿಗಳು ಸ್ಥಾನವನ್ನ ಕಳೆದುಕೊಳ್ಳಲಿದ್ದಾರೆಂದು ಹೇಳಲಾಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನ ಕೈಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸಜ್ಜನ ರಾಜಕಾರಣಿಯಾಗಿರುವ ಸುರೇಶಕುಮಾರ ಅವರಿಗೆ ಶಿಕ್ಷಣ ಸಚಿವರನ್ನಾಗಿ ಮಾಡಿದ ಮೇಲೆ, ಹಲವು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೇ ಹೊರತು, ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ. ವರ್ಗಾವಣೆ ವಿಷಯವಾಗಿ ಸುಗ್ರಿವಾಜ್ಞೆ ಹೊರಡಿಸುವ ಸ್ಥಿತಿ ಬಂತೇ ಹೊರತಾಗಿ, ವರ್ಗಾವಣೆ ಪ್ರಕ್ರಿಯೆ ನಡೆಯಲೇ ಇಲ್ಲ.

ಶಿಕ್ಷಣ ಸಚಿವ ಸುರೇಶಕುಮಾರ ಅವರು ಕೊರೋನಾ ಸಮಯದಲ್ಲಿ ಹಲವು ರೀತಿಯ ಆದೇಶಗಳನ್ನ ಮಾಡುತ್ತ ಬರುತ್ತಿದ್ದರೆಂಬ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ನೂರಾರು ಶಿಕ್ಷಕರು ಕೊರೋನಾದಿಂದ ಪ್ರಾಣವನ್ನ ಕಳೆದುಕೊಳ್ಳುವಂತಾಗಿತ್ತು.

ಇದೀಗ ಹೊಸ ಮಂತ್ರಿ ಮಂಡಲವೂ ಆಗುವ ಸಾಧ್ಯತೆಯಿದ್ದು, ಅದರಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನ ಕೈ ಬಿಡಲಿರುವುದು ಖಂಡಿತ ಎನ್ನಲಾಗಿದೆ. ಹಾಗಾದರೇ, ಹೊಸ ಶಿಕ್ಷಣ ಸಚಿವರು ಯಾರೂ ಆಗುತ್ತಾರೆನ್ನುವುದನ್ನ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *