ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ ಸ್ಪೋಟಕ ಆಡೀಯೋ…!

ಕಲಘಟಗಿ: ತಮ್ಮದೇ ಕ್ಷೇತ್ರದ ಜನರನ್ನ ತಮ್ಮದೇ ಆಡಳಿತದ ವಿರುದ್ಧ ದಂಗೆಯೇಳಲು ಜನರನ್ನ ಉತ್ತೇಜನ ನೀಡಲು ಸ್ವತಃ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣನವರ ಮುಂದಾಗಿದ್ದು, ವಿದ್ಯಾರ್ಥಿಯೋರ್ವಳನ್ನ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದ ಆಡೀಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಶಾಸಕ ಸಿ.ಎಂ.ನಿಂಬಣ್ಣನವರ ವಿದ್ಯಾರ್ಥಿನಿ ಜೊತೆ ಮಾತನಾಡಿರೋ ಸಂಪೂರ್ಣ ಆಡೀಯೋ ಇಲ್ಲಿದೆ ನೋಡಿ..
ಮಾಜಿ ಸಚಿವ ಸಂತೋಷ ಲಾಡ ಅವರು ಕಲಘಟಗಿ ತಾಲೂಕಿನಲ್ಲಿ ಮಹಿಳೆಯರ ನೋವನ್ನ ಕೇಳಿ, ಅಕ್ರಮ ಮದ್ಯವನ್ನ ಬಂದ್ ಮಾಡದೇ ಇದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹಾಲಿ ಶಾಸಕರ ಆಡೀಯೋ ಹೊರಗೆ ಬಂದಿದ್ದು, ಸಿ.ಎಂ.ನಿಂಬಣ್ಣನವರ ಕೂಡಾ ಕೆಲಸಕ್ಕೆ ಬಾರದವರ ರೀತಿಯಲ್ಲಿ ಹೇಳಿ, ಜನರನ್ನೇ ಹೋರಾಟ ಮಾಡುವಂತೆ ಪ್ರೇರಪಣೆ ಮಾಡುತ್ತಿದ್ದಾರೆ.