Posts Slider

Karnataka Voice

Latest Kannada News

ಹುಬ್ಬಳ್ಳಿ ಗಾರ್ಡನ ಪೇಟೆಯಲ್ಲಿ “ಕಂದ್ಲಿ” ಹೊಡೆತ- ಸಾವು ಬದುಕಿನ ನಡುವೆ ವ್ಯಕ್ತಿ…!

Spread the love

ಹುಬ್ಬಳ್ಳಿ: ದಾಯಾದಿಗಳ ನಡುವೆ ಆರಂಭವಾದ ಕಲಹ ವಿಕೋಪಕ್ಕೆ ಹೋಗಿ ಎಳನೀರು ಕಡಿಯುವ ಕಂದ್ಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಚಿಕಿತ್ಸೆಗಾಗಿ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹಲ್ಲೆಗೊಳಗಾದ ಮೊಹ್ಮದ ಸಾಧಿಕ

ಗಾರ್ಡನ ಪೇಟೆಯ ಮೊಹ್ಮದ ಸಾಧಿಕ ಬೆಕ್ಕಿನಬಾಯಿ ಎಂಬ ವ್ಯಕ್ತಿಯೇ ತೀವ್ರವಾಗಿ ಗಾಯಗೊಂಡಿದ್ದು, ಇವರ ಚಿಕ್ಕಪ್ಪನ ಮಗ ಸೈಯ್ಯದ ಎಂಬಾತನೇ ಹಲ್ಲೆ ಮಾಡಿದ್ದಾನೆಂದು ಗೊತ್ತಾಗಿದೆ.

ಮೊಹ್ಮದ ಸಾಧಿಕ ಎಂಬಾತನಿಗೆ ತಲೆಗೆ ತೀವ್ರವಾಗಿ ಹೊಡೆದಿದ್ದು, ಬೆರಳು ಕೂಡಾ ಕಟ್ ಆಗಿದೆ ಎಂದು ಗೊತ್ತಾಗಿದೆ. ರಸ್ತೆಯಲ್ಲಿ ತೀವ್ರವಾದ ರಕ್ತಸ್ರಾವವಾಗಿದ್ದು, ವ್ಯಕ್ತಿಗೆ ಗಂಭೀರ ಗಾಯವಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆಯನ್ನ ನಡೆಸಿ, ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *